Saturday, June 21, 2025
Saturday, June 21, 2025

ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಕೆ ಲೈವ್ ನ್ಯೂಸ್ ನ ರಂಜನ್

Date:

ಚಿತ್ರದುರ್ಗದಲ್ಲಿ ನಡೆಯುತ್ತಿರುವ 6 ಜಿಲ್ಲೆಗಳ ಪತ್ರಕರ್ತ ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ತಂಡವು ಸೆಮಿಫೈನಲ್ ಪ್ರವೇಶಿಸಿದೆ.

ಎರಡನೇ ದಿನದ ಇಂದಿನ ಆರಂಭಿಕ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಎ ತಂಡದ ವಿರುದ್ಧ ರೋಚಕ ಆಟವಾಡಿದ ಶಿವಮೊಗ್ಗ ತಂಡವು 22 ರನ್ ಗಳಿಂದ ಗೆಲುವು ಸಾಧಿಸಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಟಾಸ್ ಗೆದ್ದ ಚಿತ್ರದುರ್ಗ ಎ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಪತ್ರಕರ್ತರ ತಂಡ ನಿಗದಿತ ಐದು ಓವರ್ ಗಳಲ್ಲಿ 65 ರನ್ ಗಳನ್ನು ಗಳಿಸಿತು.

ತಂಡದ ನವೀನ್ , ಅಮೋಘ 35 ರನ್ ಗಳನ್ನು, ಲೋಹಿತ್ 28 ಗಳೊಂದಿಗೆ ಎದುರಾಳಿ ತಂಡದ ಬೌಲರ್ ಗಳನ್ನು ದಂಡಿಸಿದರು.

65 ರನ್ ಗಳ ಬೆನ್ನತ್ತಿದ ಚಿತ್ರದುರ್ಗ ಪತ್ರಕರ್ತರ ತಂಡವು ಶಿವಮೊಗ್ಗ ಪತ್ರಕರ್ತರ ತಂಡದ ಆಕಾಶ್ ಅವರ ಮಾರಕ ಬೌಲಿಂಗ್ ಮುಂದೆ ನೆಲಕಚ್ಚಿತು. ಆಕಾಶ್ ಒಂದೆ ಓವರ್ ನಲ್ಲೆ 3 ವಿಕೆಟ್ ಗಳನ್ನು ಬಲಿ ತೆಗೆದುಕೊಳ್ಳುವ ಮುಖಾಂತರ ಚಿತ್ರದುರ್ಗ ತಂಡವನ್ನು ಸೋಲಿನ ದವಡೆಗೆ ನೂಕಿದರು.

ಕೆ ಲೈವ್ ನ್ಯೂಸ್ ನ ರಂಜನ್ ಅವರು ಒಂದೇ ಕೈ ಯಲ್ಲಿ ಚೆಂಡನ್ನು ಕ್ಯಾಚ್ ಹಿಡಿದಿದ್ದಾರೆ.

ಅಂತಿಮವಾಗಿ ಚಿತ್ರದುರ್ಗ ಪತ್ರಕರ್ತರ ತಂಡವು 5 ಓವರ್ ಗಳಲ್ಲಿ 43 ಗಳಿಗೆ ಸೀಮಿತವಾಗಿ‌ ಶಿವಮೊಗ್ಗ ಪತ್ರಕರ್ತರ ತಂಡದ ಮುಂದೆ ಶರಣಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಶಾಖೆಯು ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವಹಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Yoga Day ಯೋಗ ಬದುಕಿನ ಹಾದಿಯ ಕೈದೀವಿಗೆ : ರೊ. ಕೆ. ಬಿ. ರವಿಶಂಕರ್

World Yoga Day ವಿಶ್ವ ಯೋಗ ದಿನಾಚರಾಣೆಯನ್ನು ರೊಟರಿ...

Bharat Scouts and Guides ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನಾ ರ‍್ಯಾಲಿ

Bharat Scouts and Guides ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ...

International Yoga Day ಯೋಗ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ : ಶ್ರೀ ರುದ್ರಾರಾಧ್ಯ ಸಿ ವಿ

International Yoga Day ಅಂತರಾಷ್ಟ್ರೀಯ ಯೋಗ ದಿನ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ...

MESCOM ಜೂ.24 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ...