ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ.ಡಾ. ಬಾಲಗಂಗಾಧರನಾಥ ಮಹಾಸ್ವಾಮಿಜಿ ದಿವ್ಯಾರ್ಶಿವಾದದೊಂದಿಗೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ.ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಆಶ್ರಯದಲ್ಲಿ ಡಿಸೆಂಬರ್ 13 ರಿಂದ ಡಿ.24 ರವರೆಗೆ ರಾಜ್ಯಮಟ್ಟದ 15ನೇ ಅರ್ಚಕರ ವೃತ್ತಿಶಿಕ್ಷಣ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಜಾತಿ, ಮತ, ಲಿಂಗ ಮತ ಭೇದವಿಲ್ಲದೆ ಅರ್ಚಕರಿಗೆ ಮೂಲಭೂತ ವೈದಿಕ ಶಿಕ್ಷಣವನ್ನು ಕಲಿಸುವುದು, ಕರ್ಮ ಶ್ರದ್ಧೆ, ಶಿಸ್ತು, ಸಮಯಪಾಲನೆ, ಸ್ವಚ್ಛತೆ ಮೊದಲಾದ ವಿಚಾರಗಳಲ್ಲಿ ಜಾಗೃತಿ ಮೂಡಿಸುವುದು. ಶುದ್ಧವಾದ ಆಚಾರಗಳ ಪರಿಚಯ ಮಾಡಿಸುವುದು. ಅರ್ಚಕರು ಸಂಸ್ಕಾರವಂತರಾಗಿ ಸಮಾಜಕ್ಕೂ ಭಕ್ತರಿಗೂ ಸಂಬಂಧದ ಕೊಂಡಿ ಯಾಗುವಂತೆ ಪ್ರೇರೇಪಿಸುವುದು ಅರ್ಚಕ ತರಬೇತಿ ಶಿಬಿರದ ಪ್ರಮುಖ ಉದ್ದೇಶಗಳಾಗಿವೆ.
ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.
ಆಸಕ್ತರು ಮೊ:9481492311, 9448124141, 9886958585 ಅನ್ನು ಸಂಪರ್ಕಿಸಬಹುದು.