Friday, December 5, 2025
Friday, December 5, 2025

ಶಿವಮೊಗ್ಗ ಬಸ್ ನಿಲ್ದಾಣದಲ್ಲೊಂದು ಕೊರತೆ

Date:

ಶಿವಮೊಗ್ಗ ಈಗ ಬೇಸಿಗೆಯ ಬಾಯಿಗೆ ತುತ್ತಾಗಲು ಕೆಲವೇ ದಿನಗಳಿವೆ.ಗಡಗಡ ಚಳಿಯ ಸಂಗಡ ಬಿರುಬಿಸಿಲು ರಾಚಲು ಕಾಯುತ್ತಿದೆ.

ಪುಣ್ಯಾತ್ಮರಾದ ಶಾಸಕರು,ಸಂಸದರು ಅಲ್ಲಲ್ಲಿ ಬಸ್ ತಂಗುದಾಣಗಳನ್ನ ನಿರ್ಮಿಸಿ ದೇಶಸೇವೆ ಮಾಡಿದ್ದಾರೆ.

ಸದ್ಯ ಶಿವಮೊಗ್ಗದ ಮುಖ್ಯ ಸಾರಿಗೆ ಬಸ್ ನಿಲ್ದಾಣ ವರ್ಣಮಯವಾಗಿ ತಲೆಯೆತ್ತಿ ನಿಂತಿದೆ. ಆದರೆ ಅಲ್ಲಿ ಬಸ್ ಗೆ ಕಾಯುವವರಿಗೆ ನೆರಳಿದೆ. ಕೂರಲು ಆಸನವಿವೆ.

ಎಲ್ಲಾ ಸರಿ.ಬಸ್ ಗಳಿಂದ ಇಳಿಯುವಾಗ ಮಾತ್ರ ನರಕ ಸದೃಶ. ಪ್ರಯಾಣಿಕರು ತಮ್ಮ ಕೈಚೀಲ, ಸೂಟ್ ಕೇಸು
ಟ್ರಾಲಿ ಬ್ಯಾಗು ಗಳಿಂದ ಇಳಿದಾಕ್ಷಣ
ಸೂರ್ಯ ನೆತ್ತಿ ಕುಕ್ಕುತ್ತಾನೆ ಇಲ್ಲವೇ
ಮೂರುಗಂಟೆಯ ಬಿಸಿಲನ್ನ ಮುಖಕ್ಕೆ ರಾಚುತ್ತಾನೆ. ತಾಯಂದಿರಿದ್ದರಂತೂ ಮಕ್ಕಳನ್ನ ಹಿಡಿದು ಸಂಭಾಳಿಸುವಷ್ಟರಲ್ಲಿ ಆ ಬಿಸಿಲಿನ ಝಳಕ್ಕೆ ಹೈರಾಣು.

ಆಟೋ ಬರುವವರೆಗೂ ಬಿಸಿಲಲ್ಲಿ ( ಅಥವಾ ಮಳೆಯಲ್ಲಿ) ಒದ್ದಾಡಬೇಕು. ನಾನು ನೋಡುತ್ತಿದ್ದಂತೆ ಓರ್ವ ಮಹಿಳೆ ಬಿಸಿಲಿನ ಝಳಕ್ಕೆ ತಲೆ ತಿರುಗಿ ವಾಂತಿ ಮಾಡಿಕೊಂಡು ರೀಲಿಂಗ್ಸ್ ಹಿಡಿದು ಕೂತಿದ್ದರು.

ಆದ್ದರಿಂದ ಪುಣ್ಯಾತ್ಮರಿಗೆ ನಾವು
ಕೇಳುವುದಿಷ್ಟೆ. ಬಸ್ ನಿಂದ ಇಳಿಯುವ ಸ್ಥಳದಲ್ಲಿ ಕೊಂಚ ನೆರಳು ಇರುವಂತೆ ಮಾಡಿ. ಬಿಸಿಲಿಗೂ ಮತ್ತು ಮಳೆಗೂ ಅದರಿಂದ ರಕ್ಷಣೆ ಸಿಗುತ್ತದೆ.
ಸಾರಿಗೆ ಸಂಸ್ಥೆಯವರು ಈ ಬಗ್ಗೆ ತಕ್ಷಣ ಗಮನ ಹರಿಸಿ.

ಪ್ರಯಾಣಿಕರ
ಅಹವಾಲನ್ನ ಅದು ಸುದ್ದಿ ರಂಪವಾಗುವ ಮುನ್ನವೇ ಕಾರ್ಯರೂಪಕ್ಕೆ ತರಲು ಈ ಬರಹದ ಹಕ್ಕೊತ್ತಾಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...