Saturday, April 26, 2025
Saturday, April 26, 2025

ಎಲ್ಲೆಲ್ಲಿ ನಿಲ್ಲಲಯ್ಯಾ ಶಿವನೆ?

Date:

ಈಗ ಚುನಾವಣಾ ಕ್ಷೇತ್ರಗಳ ಆಯ್ಕೆ
ಬಹಳ ಸಿಕ್ಕುಸಿಕ್ಕಾಗುತ್ತಿದೆ.
ಪಕ್ಷಗಳ ಪ್ರಮುಖ ನಾಯಕರು ಎಲ್ಲ ಉಪ ನಾಯಕರಿಗೂ ಬೇಕಾದವರೆ. ಆದರೆ ಆ ಬೇಕಾದವರ ಕ್ಷೇತ್ರದ ಜನತೆಗೆ ಈ ಜನಪ್ರಿಯ ನಾಯಕರು
ಸಲ್ಲುತ್ತಾರೆಯೆ? ಎಂಬುದು ಗಂಭೀರವಾದ ಪ್ರಶ್ನೆ.

ಈಗ ಸಿದ್ದರಾಮಯ್ಯನವರ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.ಬಹುಷಃ ಅವರಂದುಕೊಂಡದ್ದಕ್ಕಿಂತ ಜಾಸ್ತಿಯೇ ಆಗುತ್ತಿದೆ.

ಒಮ್ಮೆ ಮುಖ್ಯಮಂತ್ರಿಯಾಗಿದ್ದವರು
ಮತ್ತೊಮ್ಮೆ ಆವಧಿಗೆ ತಾವು ಕ್ಷೇತ್ರದಿಂದಲೇ ಸ್ಪರ್ಧಿಸಿದರು.
ಆದರೆ ಅವರ ಭವಿಷ್ಯದ ಬಗ್ಗೆ ಗುಪ್ತಚರ ವರದಿ ಅವರನ್ನ ಅಧೀರತೆಗೆ ತಳ್ಳಿತು. ಬದಾಮಿಯಂತಹ‌ ಸುಭದ್ರ ಕ್ಷೇತ್ರ
ಆರಿಸಿಕೊಳ್ಳುವಂತೆ ಶಿಫಾರಸು ಬಂತು.ಅದು ನಿಜವೇ ಆಯಿತು.
ಒಮ್ಮೆ ಮುಖ್ಯಮಂತ್ರಿಯಾಗಿದ್ದವರು
ಆರಿಸಿದ ಕ್ಷೇತ್ರದಿಂದಲೇ ಸೋಲುವುದೆಂದರೆ ಅದು ಜೀರ್ಣಿಸಿಕೊಳ್ಳಲಾಗದ ಸಂಗತಿ.

ಇದೇ ಸನ್ನಿವೇಶ ರಾಹುಲ್ ಗಾಂಧಿಯವರಿಗೂ ಅಮೇಥಿಯಲ್ಲಿ
ಎದುರಾಗಿತ್ತು. ಅನಿಶ್ಚತೆಯಿಂದ ಅವರು ಕೇರಳದ ವೈನಾಡಿನಿಂದ ಸ್ಪರ್ಧಿಸಿದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಪರಾಭವ. ವೈನಾಡಿನಲ್ಲಿ ಜಯಮಾಲೆ ಧರಿಸಿದರು. ಅಂದರೆ ಇಲ್ಲಿ ಈರ್ವರ ದೌರ್ಬಲ್ಯವನ್ನ ಅಳೆಯುತ್ತಿಲ್ಲ.. ಚುನಾವಣೆಯಲ್ಲಿ ಏನು ಬೇಕಾದರೂ ಘಟಿಸಬಹುದು.

ಯೋಜನೆಗಳನ್ನ ರೂಪಿಸಿದರೂ ಸಮರ್ಥ ಜಾರಿಗೆಯಾಗದೇ ಸಿದ್ಧರಾಮಯ್ಯ ತಮ್ಮ ಸ್ವಂತ ಕ್ಷೇತ್ರದಲ್ಲಿ ಸೋಲಬೇಕಾಯಿತು. ಜೊತೆಗೆ ಎದುರಾಳಿ ಜಿಟಿಡಿ ಗೌಡರೂ
ಕಡಿಮೆ ತೂಕದವರಲ್ಲ. ಅಮೇಥಿಯಲ್ಲಿ ಬಿಜೇಪಿಯ ಗಾಳಿ
ಮತ್ತು ಎದುರಾಳಿ ಕ್ಷೇತ್ರದಲ್ಲಿಯೇ ಇದ್ದು ನಡೆಸಿದ ಸಂಪರ್ಕ ಪ್ರಚಾರಗಳು‌ ರಾಹುಲ್ ಗೆಲುವಿಗೆ ಪ್ರತಿರೋಧ ಒಡ್ಡಿರಬಹುದು.

ಈಗ ರಾಜ್ಯದಲ್ಲಿ ಸಿದ್ಧರಾಮಯ್ಯ
ಕೋಲಾರದ ಕರೆಗೆ ಸೆಳೆಯಲ್ಪಡುತ್ತಿದ್ದಾರೆಯೆ? ಅಲ್ಲಿಯ ಮುಂದಾಳುಗಳು ನಿಜಕ್ಕೂ ಅವರನ್ನ ಗೆಲ್ಲಿಸುತ್ತಾರೆಯೆ? ಈಗ ಅವರ ಜನಪ್ರಿಯತೆ ಒರೆಗಲ್ಲು ಏನು ಹೇಳುತ್ತದೆ ? ಇವೆಲ್ಲವೂ ನಿಗೂಢ.

ಕೋಲಾರದ ರಾಜಕೀಯದ ಒಳಸುಳಿಗಳು ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲದೇನಿಲ್ಲ. ಹಿರಿಯ ರಾಜಕಾರಣಿ ಮುನಿಯಪ್ಪ ತಮ್ಮ ಮುನಿಸನ್ನ ಹಿಂದೆಯೇ ತೋರಿಸಿಕೊಂಡಿದ್ದಾರೆ. ವರ್ತೂರು ಪ್ರಕಾಶ್ ಒಂದೇ ಜಾತಿಯ ಮುಖಂಡರು. ಸಿದ್ಧರಾಮಯ್ಯನವರನ್ನ ಸೋಲಿಸುವುದೇ ಗುರಿ ಎಂಬಂತೆ ಹೇಳಿಕೆ ಬಂದಿದೆ. ಪಕ್ಷೇತರ ಶರತ್ ಬಚ್ಚೇಗೌಡರು ಕಾಂಗ್ರೆಸ್ ಬೆಂಬಿಲಿಸಿದ್ದಾರೆ.ಅವರ ತಂದೆ ಬಚ್ಚೇಗೌಡರು ಬಿಜೆಪಿಯಿಂದ ಸಂಸದರಾಗಿದ್ದಾರೆ.

ಇದಕ್ಕೆಲ್ಲ ಮುಂಚಿತವಾಗಿ ಹಿಸ ಮುಖಗಳೂ ರಾಜಕೀಯಕ್ಕೆ ಬರಲು
ಅಖಾಡ ಸಿದ್ಧಮಾಡಿಕೊಳ್ಳುತ್ತಿವೆ.
ಜೆಡಿಎಸ್ ಪಕ್ಷವೂ ಈಗ ಪಂಚರತ್ನ
ಪಾಂಚಜನ್ಯ ಮೊಳಗಿಸಿದೆ. ಒಂದು ರೀತಿಯ ಮಿಶ್ರವಾತಾವರಣ ಸೃಷ್ಟಿಯಾಗುತ್ತಿದೆ. ಅತ್ತ ಬದಾಮಿಯಲ್ಲಿ ಬೇರೆ ಕುಳಗಳು ಟಿಕೆಟ್ ಗೆ ಪ್ರಯತ್ನಿಸುತ್ತಿವೆ. ಮಗ ಡಾ.ಯತೀಂದ್ರ ಅವರು ಕ್ಷೇತ್ರತ್ಯಾಗದ
ಮಾತಾಡುತ್ತಿದ್ದಾರೆ.
ಈಗ ಏನು ಗ್ಯಾರಂಟಿ? ಜನಗಳದ್ದು ಏನು ವಾರಂಟಿ?
ಇಷ್ಟೆಲ್ಲ ಆದರೂ ಸಿದ್ಧರಾಮಯ್ಯ ಅದೃಷ್ಟವಂತರೆನ್ನಬಹುದು.ಏಕೆಂದರೆ
ಕಾಂಗ್ರೆಸ್ ನಲ್ಲಿ ರಾಜ್ಯಮಟ್ಟದ ಚರಿಷ್ಮ ಇರುವ ಏಕೈಕ ನಾಯಕ.
ಸದನದಲ್ಲಿ ಅನುಭವಿ ಮಾತುಗಾರ.

ಬದಾಮಿಗೆ ಬಂದರೆ ರಾಮುಲು
ಇತ್ತ ಚಾಮುಂಡೇಶ್ವರಿಗೆ ಬಂದರೆ ಹಳೇ ಎದುರಾಳಿ ಜಿಟಿಡಿ ಗೌಡರು.
ವರುಣಾದಲ್ಲಿ ಪ್ರೀತಿಪಾತ್ರ ಪುತ್ರ.
ಏನು ಮಾಡಲಿ ಶಿವನೆ?
ಅದಕ್ಕೆ ಈಗ ಅವರು ಕ್ಷೇತ್ರದ ಹೆಸರು ಸೂಚಿಸದೇ ಪಕ್ಷಕ್ಕೆ ಅಭ್ಯರ್ಥಿ ಅರ್ಜಿ
ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...