ಸಮಾಜಕ್ಕೆ ನೀಡಿರುವ ಸೇವೆ(ದಾನ)ಯನ್ನು ಗುರುತಿಸಿ ಖ್ಯಾತ ಉದ್ಯಮಿ ರತನ್ ಟಾಟಾ ಮತ್ತು ಚಲಾಸಾನಿ ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಗಣ್ಯರಿಗೆ ಆರ್ ಎಸ್ ಎಸ್ ಅಂಗ ಸಂಸ್ಥೆಯಾದ ಸೇವಾ ಭಾರತಿ “ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಗುರುತಿಸಿ ಇತರ 24 ಮಂದಿ ಗಣ್ಯರು ಹಾಗೂ ಸಂಸ್ಥೆಗಳಿಗೂ ಕೂಡಾ “ಸೇವಾ ರತ್ನ” ಪ್ರಶಸ್ತಿ ನೀಡಲಾಗಿದೆ.
ಸಮಾರಂಭದಲ್ಲಿ ಉತ್ತರಾಖಂಡ್ ರಾಜ್ಯಪಾಲ ಲೆಫ್ಟಿನೆಂಟ್ (ನಿವೃತ್ತ) ಜನರಲ್ ಗುರ್ಮಿತ್ ಸಿಂಗ್ ಭಾಗವಹಿಸಿ, ಪ್ರಶಸ್ತಿ ಪ್ರದಾನ ಮಾಡಿರುವುದಾಗಿ ವರದಿ ತಿಳಿಸಿದೆ.
ಈ ಸಮಾರಂಭದಲ್ಲಿ ರತನ್ ಟಾಟಾ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ವರದಿ ವಿವರಿಸಿದೆ. ಸಾಮಾಜಿಕ ಅಭಿವೃದ್ಧಿಗಾಗಿ ಬೆಲೆಕಟ್ಟಲಾರದ ಕೊಡುಗೆಯನ್ನು ನೀಡಿರುವ ಆಧಾರದ ಮೇಲೆ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಸೇವಾ ಭಾರತಿ ಸಂಸ್ಥೆ ತಿಳಿಸಿದೆ.