ವಿದ್ಯಾರ್ಥಿಗಳು ಏನಾದರೂ ಬೇಡಿಕೆ ಈಡೇರಬೇಕೆಂದರೆ ಈಗ ಮುಷ್ಕರ, ಪ್ರತಿಭಟನೆ, ಜಾಥಾ ಇತ್ಯಾದಿ ಮಾರ್ಗಗಳನ್ನ ಮೊರೆ ಹೋಗುತ್ತಾರೆ.
ಆದರೆ ನೀವೀಗ ಅಚ್ವರಿಪಡುವಂತಹ ಸುದ್ದಿ ಇದೆ. ಓರ್ವನೇ ವಿದ್ಯಾರ್ಥಿ ಅಂತಹ ಕೆಲಸ ಮಾಡಿದ್ದಾನೆ. ತನ್ನ ಪ್ರಯತ್ನದಿಂದ ಇಡೀ ಊರಿಗೇ ಉಪಕಾರ ಮಾಡಿದ ಮಾಹಿತಿ ಇಲ್ಲಿದೆ.
ಕುಮಾರ ಸ್ವಾಮಿ ಅವರು ಸೀಎಂ ಆದಾಗಿನಿಂದ ಈ ಹುಡುಗ ತನ್ಮ ಊರಾದ ನಾಲತವಾಡಿಗೆ ಪಿಯು ಕಾಲೇಜು ಬೇಕೆಂದು ಅಲವತ್ತುಕೊಂಡಿದ್ದ.
ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ನಾಲತವಾಡಿಯಲ್ಲಿ ಈಗ ಪಿಯು ಕಾಲೇಜು ಮಂಜೂರಾಗಿದೆ.
ಆ ಹುಡುಗನ ಹೆಸರು.ವಿಜಯ ಜೋಶಿ.
ಆತ ಮಾಡಿದ್ದಿಷ್ಟೆ. ತನ್ನ ರಕ್ತವನ್ನೇ ಮಸಿಯಂತೆ ಮಾಡಿ ಪತ್ರ ಬರೆದ .
2019 ರಲ್ಲಿ ಮೋದೀಜಿ ಅವರಿಗೆ
ನೆತ್ತರ ಅಕ್ಷರದಲ್ಲೇ ಮನವಿ ಬರೆದಿದ್ದಾನೆ.
ರಕ್ತಕ್ಕೆ ಬೆಲೆ ಸಿಕ್ಕಿದೆ. ಮೇಲಿನ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಆತನ ಮೊರೆ ತಲುಪಿತು.
ಈಗ ನಾಲತವಾಡಕ್ಕೆ ಪಿಯು ಕಾಲೇಜು
ಬಂದಿದೆ.ಜನ ಈಗ ಡೊನೇಷನ್ ಇಲ್ಲದೇ ಮಕ್ಕಳನ್ನ ಸೇರಿಸಲು ತುದಿಗಾಲಲ್ಲಿದ್ದಾರೆ
ಓರ್ವನ ಅವಿರತ ಪಯತ್ನ. ಅದೂ ರಕ್ತದಲ್ಲಿ ಬರೆದ ಪತ್ರ ಇಡೀ ಊರಿಗೇ
ಉಪಕಾರ ಮಾಡಿದೆ. .