ಕಾಂಗ್ರೆಸ್ನಿಂದ ಅಭಿಯಾನದ ಭಾಗವಾಗಿ ಬಿಜೆಪಿ ಲಂಚ ರೇಟ್ ಕಾರ್ಟ್ ಬಿಡುಗಡೆ ಮಾಡಿದೆ.
ಸರ್ಕಾರದ ಡೀಲ್ಗಳು, ಶೇಕಡವಾರು ಲೂಟಿಯ ಪಟ್ಟಿ ರಿಲೀಸ್ ಮಾಡುವ ಮುಖಾಂತರ ಕಾಂಗ್ರೆಸ್ ತನ್ನ ಆಕ್ರೋಶವನ್ನು ಹೊರಹಾಕಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ , ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ ಹರಿಪ್ರಸಾದ್ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ಶೇ.40 ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್ ಪಟ್ಟಿಯನ್ನು ಕಾಂಗ್ರೆಸ್ಸಿಗರು ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.
ಕೋವಿಡ್ ಕಿಟ್ ಪೂರೈಕೆಗಾಗಿ ಶೇ.75, ಪಿಡ್ಲೂಡಿ ಒಪ್ಪಂದ ಶೇ.40, ಮಠಕ್ಕೆ ಅನುದಾನ ಶೇ. 40, ಮೊಟ್ಟೆ ಪೂರೈಕೆ ಶೇ.40, ಬೆಸ್ಕಾಂ 1 ಕೋಟಿ, ಪಿಎಸ್ಐ -80 ಲಕ್ಷ, ಸಹಾಯಕಪ್ರಾಧ್ಯಾಪಕ-50ರಿಂದ 70 ಲಕ್ಷ, ಬಿಡಿಎ ಆಯುಕ್ತ 10-415 ಲಕ್ಷ ರೂ, ಡಿಸಿ-ಎಸ್ಪಿ 1ರಿಂದ 16ಕೋಟಿ ರೂ. ವರ್ಗಾವಣೆಮಾಡಿದೆ. ಸರ್ಕಾರದ ರೇಟ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಕೋಟಿ ಕೋಟಿ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.