Wednesday, October 2, 2024
Wednesday, October 2, 2024

ಕಾನೂನು ರಚನೆ ನ್ಯಾಯಾಲಯದ ಕೆಲಸವಲ್ಲ-ಸುಪ್ರೀಂ ಕೋರ್ಟ್

Date:

ಅಪರಾಧಿ ಪ್ರಕರಣಗಳ ಮೊಕದ್ದಮೆ ಇರುವ ಜನಪ್ರತಿನಿಧಿಗಳಿಗೆ ಸಿಗುವ ವೇತನವನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಮನವಿಯನ್ನು ತಳ್ಳಿಹಾಕಲಾಯಿತು. ಸಂಸದರು ಮತ್ತು ಶಾಸಕರ ವೇತತನವನ್ನು ತಡೆಹಿಡಿಯಬೇಕೆಂದು ಈ ಮನವಿಯನ್ನು ದಾಖಲಿಸಲಾಗಿತ್ತು.

ಇಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲದಿದ್ದರೆ, ಕಡಿಮೆ ಪಕ್ಷ ವೇತನವನ್ನು ತೆಗೆದುಕೊಳ್ಳಲು ಅನುಮತಿ ನೀಡಬಾರದು. ಎಂದು ಈ ಮನವಿಯಲ್ಲಿ ಹೇಳಲಾಗಿತ್ತು.

ನ್ಯಾಯಾಲಯವು, ಕಾನೂನನ್ನು ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಶಾಸಕರು ಮತ್ತು ಸಂಸದರ ವೇತನ ಅಥವಾ ಇತರ ಸೌಲಭ್ಯಗಳನ್ನು ನೀಡುವ ನಿರ್ಣಯವನ್ನು ಸರಕಾರ ತೆಗೆದುಕೊಳ್ಳುತ್ತದೆ. ಸಭಾಗೃಹದಿಂದ ಹೋದ ಬಳಿಕ ಈ ವಿಷಯವನ್ನು ನಿರ್ಣಯಿಸುವ ಅಧಿಕಾರವೂ ಈ ಸದಸ್ಯರ ಕೈಯಲ್ಲಿಯೆ ಇರುತ್ತದೆ. ವೇತನ ಮತ್ತು ನಿವೃತ್ತಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಹೆಚ್ಚು ಕಡಿಮೆ ಮಾಡುವ ಅಧಿಕಾರವೂ ಸಂಸದರು ಮತ್ತು ಶಾಸಕರ ಕೈಯಲ್ಲಿದೆ. ಅವರು ತಮ್ಮ ಹಿತವನ್ನು ಅಪಾಯಕ್ಕೀಡು ಮಾಡಿ ನಿವೃತ್ತಿವೇತನ ಅಥವಾ ವೇತನವನ್ನು ತೆಗೆದುಕೊಳ್ಳಲು ನಿರಾಕರಿಸಿರುವುದು ಎಲ್ಲಿಯೂ ಕಾಣಿಸಿಲ್ಲ. ಅಬ್ಜಾವಧಿಯ ಸಂಪತ್ತು ಇರುವ ಕೆಲವು ಸದಸ್ಯರೂ ವೇತನ ಹಾಗೂ ನಿವೃತ್ತಿವೇತನವನ್ನು ಬಿಡುವುದಿಲ್ಲ. ಇನ್ನೊಂದೆಡೆ ಕೆಲವು ಸದಸ್ಯರು ಮಾತ್ರ ವೇತನವನ್ನು ನಿರಾಕರಿಸಿದ ವಾರ್ತೆ ಬೆಳಕಿಗೆ ಬಂದಿತ್ತು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು...

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...