Tuesday, December 16, 2025
Tuesday, December 16, 2025

ಮುರುಘಾ ಮಠದ ಬಗ್ಗೆ ಕೋಡಿಶ್ರೀಗಳವಾಣಿ

Date:

ಮುರುಘಾ ಮಠದ ಆಂತರಿಕ ಸಮಸ್ಯೆಗಳು ಆ ಸಂಸ್ಥೆಯನ್ನು ಬಲಿತೆಗೆದುಕೊಂಡಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕುಟುಂಬದ ಅಪೂರ್ವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೋಡಿಮಠದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

ಆಚಾರ, ವಿಚಾರ ಮತ್ತು ಪ್ರಚಾರ ಸಮಾಜದಲ್ಲಿ ಬಹುಮುಖ್ಯ. ಯಾರಾದರೂ ಪರಸ್ಪರ ಭೇಟಿಯಾದರೆ ಮೊದಲು ಕೇಳುವುದೇ ಏನ್ ಸಮಾಚಾರ ಎಂದು. ಇಂದು ನಮ್ಮ ಪರಂಪರಾಗತ ಆಚಾರ. ಉಭಯ ಕುಶಲೋಪರಿಯ ಅನಂತರ ವಿಚಾರ ವಿನಿಮಯ. ತನ್ನೊಳಗಿನ ವಿಚಾರವನ್ನು ಸಾರ್ವತ್ರೀಕರಣಗೊಳಿಸಲು ಒಂದಷ್ಟು ಪ್ರಚಾರ. ಆದರೆ ಇಂದು ಇವೆಲ್ಲವನ್ನೂ ಹಿಂದೆ ತಳ್ಳಿ ಅಪಪ್ರಚಾರ ಮುಂಚೂಣಿಗೆ ಬಂದಿದೆ ಎಂದರು.

ಅಪಪ್ರಚಾರದ ಅಲೆ ಧರ್ಮ, ರಾಜಕಾರಣ ಸೇರಿದಂತೆ ಎಲ್ಲಕಡೆ ಆವರಿಸಿದೆ. ಇದರಿಂದ ಮೌಲ್ಯಗಳು ಹಾಳಾಗುತ್ತಿವೆ. ಉತ್ತಮ ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪಪ್ರಚಾರ ಒಂದು ಸಾಮಾಜಿಕ ಪೀಡೆಯಾಗಿ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸ್ವಾಮೀಜಿ ಸತ್ಯಕ್ಕೆ ಅಂತಿಮ ಗೆಲುವು ಎನ್ನುವುದಾದರೂ ಇಂದು ಸತ್ಯ ಹೊರಬರುವಷ್ಟರಲ್ಲಿ ವ್ಯಕ್ತಿ ಸಾವಿನ ಮನೆ ಸೇರಿರುತ್ತಾನೆಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...