Wednesday, December 17, 2025
Wednesday, December 17, 2025

ಕನ್ನಡ ಕಂಪು ಜರ್ಮನಿ ಸಿಂಗಾಪುರಗಳಲ್ಲಿಪಸರಿಸಿದೆ- ನಾಗಾಭರಣ

Date:

ಕನ್ನಡ ಕಟ್ಟುವ ಕೆಲಸ ಹೇಗೆ ಮಾಡಬಹುದು ಎಂಬ ವಿಷಯ ಪ್ರಸ್ತಾಪಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮೂರುವರ್ಷದಲ್ಲಿ ಒಂದು ವರೆ ವರ್ಷ ಕೊರೋನಗೆ ಅವಧಿ ಕಳೆಯಿತು. ನಂತರ ಹೊಸ ಅವಿಷ್ಕಾರದೊಂದಿಗೆ ಆರಂಭವಾಗಿತು ಎಂದರು.

ಅವರು ಮೀಡಿಯಾ ಹೌಸ್ ನ ಸುದ್ದಿಗೋಷ್ಠಿ ಯಲ್ಲಿ , ಕನ್ನಡ ಕಲಿಕಾ ಕಾರ್ಯಗಾರ ಅನಿವಾಸಿ ಶಿಕ್ಷಕರಿಗೆ ನಡೆಸಲಾಯಿತು. ನಿರಂತರವಾಗಿ ನಡೆದಿದೆ. 68 ರಾಷ್ಟ್ರಗಳಿಂದ ಟೈಮ್ ಜೋನ್ ಮಾಡಿಕೊಂಡು 13 ರಿಂದ 20 ರಾಷ್ಟ್ರಗಳನ್ನ ಒಗ್ಗೂಡಿಸಲಾಯಿತು ಎಂದರು.

ಪ್ರತಿ ರಾಷ್ಟ್ರದಲ್ಲಿ ತಮಿಳು ಮತ್ತು ಸ್ಥಳೀಯ ಭಾಷೆ ಇದೆ. ಜರ್ಮನಿ ಸಿಂಗಾಪುರದಲ್ಲಿ ಫಾರೀನ್ ಲಾಂಗ್ವೇಜ್ ಆಪ್ಷನಲ್ ಭಾಷೆಯಾಗಿ ಕನ್ನಡ ಭಾಷೆಯೂ ಈಗ ಒಂದಾಗಿದೆ. ಮೊದಲು ಇರಲಿಲ್ಲ. ಇದು ಕೊರೋನ ಸಂಧರ್ಭದಲ್ಲಿ ಉಂಟಾದ ಬದಲಾವಣೆ ಆಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಮಾರ್ಗವನ್ನ ಕಂಡುಕೊಂಡಿದೆ ಎಂದರು.

ಕನ್ನಡ ಶಾಲೆಗಳಲ್ಲಿ ಕನ್ನಡ ಗೊತ್ತಿರುವರು ಹೊರ ರಾಷ್ಟ್ರಗಳಲ್ಲಿ ಕನ್ಬಡ ಶಾಲೆ ಆರಂಭಿಸಿದರು. ಮಾದರಿ ಇರಲಿಲ್ಲ. ನಲಿಕಲಿ ರವೀಂದ್ರರವರು ಹೊರ ರಾಷ್ಟ್ರಗಳ ತೊಡಕುಗಳನ್ನ ನಿವಾರಿಸಿದರು. ಅವರನ್ನ ಗ್ರೂಪ್ ಮಾಡಿ ಪಟ್ಟಿ ಸಿದ್ದ ಪಡಿಸಲಾಯಿತು. ಪಠ್ಯ ಕ್ರಮಗಳನ್ನ‌ ಆಯಾ ರಾಷ್ಟ್ರಗಳಿಗೆ ಬೇಕಾಗುವಂತೆ ಮಾರ್ಪಾಟು ಮಾಡಿಕೊಂಡರು. ಹಿಂದೆ ಶಾಲೆಗಳು ನಮ್ಮ ಮಾದರಿ ಆರಂಭಿಸಿದರು. ಈಗ ಹೊರ ರಾಷ್ಟ್ರಗಳಲ್ಲಿ ಚೇಂಜ್ ಆಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಮತ್ತು ರಾಜ್ಯಸಮಿತಿ ಸದಸ್ಯ ಟೆಲೆಕ್ಸ್ ರವಿ ಕುಮಾರ್ ಸಂವಾದದಲ್ಲಿ ಉಪಸ್ಥತಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...