ಇತ್ತೀಚೆಗೆ ಇಟಲಿ ಮತ್ತು ಸ್ಕಾಟ್ಲ್ಯಾಂಡ್ ಪ್ರವಾಸ ಮುಗಿಸಿ ಬಂದ ಪ್ರಧಾನಿ ಮೋದಿ ಜಿ ಅವರು ಎರಡು ರಾಷ್ಟ್ರಗಳಲ್ಲಿ ನಡೆದ ಸಮಾವೇಶದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
” ನನಗೆ ಪ್ಯಾರಿಸ್ನಲ್ಲಿ ನಡೆದ ಸಮಾವೇಶ ಕೇವಲ ಶಿಖರ ಸಮಾವೇಶವಾಗಿಲ್ಲ. ಅದು ನನಗೆ ಭಾವನಾತ್ಮಕ, ಬದ್ಧತೆಯುಳ್ಳದ್ದಾಗಿದೆ. ಅಲ್ಲಿ ನೀಡಿದ ಭರವಸೆ ಕೇವಲ ಇತರ ರಾಷ್ಟ್ರಗಳಿಗೆ ನೀಡಿದ ಹೇಳಿಕೆ ಆಗಿಲ್ಲ. ಆದರೆ ಎಲ್ಲಾ ಭರವಸೆಗಳು ಭಾರತದ 125 ಕೋಟಿ ಪ್ರಜೆಗಳು ತಮಗೆ ತಾವೇ ನೀಡಿದ ಭರವಸೆಗಳಾಗಿವೆ ಎಂದಿದ್ದಾರೆ. ಜಗತ್ತು ಇಂದು ಭಾರತದ ಬೃಹತ್ ಆರ್ಥಿಕ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿವೆ. ಇದು ಪ್ಯಾರಿಸ್ ಶೃಂಗಸಭೆಯಲ್ಲಿ ಶೃತಪಟ್ಟಿದೆ. ನಾವು ಕಠಿಣ ಪರಿಶ್ರಮ ಹಾಗೂ ನಿರ್ಧಾರಗಳಿಂದ ಉತ್ತಮ ಫಲಿತಾಂಶವನ್ನು ನೀಡಲಿದ್ದೇವೆ” ಎಂದರು.