Thursday, February 5, 2026
Thursday, February 5, 2026

ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕ ಹಿನ್ನೆಲೆ ಪ್ರತಿಭಟನೆ

Date:

ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ
ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಳಪೆ ಅವೈಜ್ಞಾನಿಕ ಕಾಮಗಾರಿಯ ಖಂಡಿಸಿ 5ನೇ ಸರಣಿ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದ ಪೊಲೀಸ್ ಚೌಕಿಯಲ್ಲಿ ಕಾಮಗಾರಿ ನಡೆದ ಎರಡೇ ತಿಂಗಳಲ್ಲಿ 100 ಅಡಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ.

ಅಸಂಬದ್ಧ ಡ್ರೈನ್ ಸ್ಲಾಬ್‌ಗಳ ಜೋಡಣೆ ಮಾಡಲಾಗಿದೆ. * ಹತ್ತಾರು ಕಡೆ ಗುಂಡಿ ಬಿದ್ದ ಪುಟ್‌ ಪಾತ್‌ಗಳು ಕಂಡುಬರುತ್ತಿದೆ.
ಅವೈಜ್ಞಾನಿಕ ಗ್ರಿಟ್ ಚೇಂಬರ್ ಅಳವಡಿಕೆಯಿಂದ ಚರಂಡಿಗೆ ನೀರು ಹರಿಯುತ್ತಿಲ್ಲ * ಕನಿಷ್ಠ 15 ವರ್ಷ ಬಾಳಿಕೆ ಬರಬೇಕಾದ ರಸ್ತೆಯಲ್ಲಿ ಎರಡೇ ತಿಂಗಳಲ್ಲಿ ಗುಂಡಿ ಬಿದ್ದಿವೆ.

ಇನ್ನು 1-2 ವರ್ಷದಲ್ಲಿ ಸಂಪೂರ್ಣ ನಾಶವಾಗಿ ನಮ್ಮ ಬದುಕು ದುಸ್ತರವಾಗಲಿದೆ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಾಂತರ ಮೌಲ್ಯದ ರಾಷ್ಟ್ರೀಯ ಸಂಪತ್ತುಗಳಾದ ಮರಳು, ಜೆಲ್ಲಿ, ಟಾರು ನಷ್ಟವಾಗಿದೆ.ಪರೋಕ್ಷವಾಗಿ ನಾಡಿನ ಪರಿಸರಕ್ಕೆ ಭಾರೀ ಹೊಡೆತ ಬಿದ್ದಿದೆ.
ಜನರ ಕೋಟ್ಯಾಂತರ ರೂಪಾಯಿಯ ತೆರಿಗೆ ಹಣ ನಷ್ಟವಾಗಿದೆ.

ಈ ಕಾರಣದಿಂದಾಗಿ ಮಾನ್ಯ ಜಿಲ್ಲಾಧಿಕಾರಿಗಳು,, ಶಾಸಕರು, ಸಂಸದರು, ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರನ್ನು ಶಿಕ್ಷಿಸಬೇಕು. ಇಲ್ಲವೇ, ಕಾಮಗಾರಿಯ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಬೇಕೆಂದು ಆಗ್ರಹಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...