Monday, August 3, 2026
Monday, August 3, 2026

ಯುಪಿಎಸ್ ಸಿ ನೇಮಕಾತಿ ಪರೀಕ್ಷೆಗಳಿಗೆ ಒನ್ ಟೈಮ್ ರಿಜಿಸ್ಟ್ರೇಷನ್ ಸೌಲಭ್ಯ

Date:

ಕೇಂದ್ರ ಲೋಕಸೇವಾ ಆಯೋಗ ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ‘ಒನ್ ಟೈಮ್ ರಿಜಿಸ್ಟ್ರೇಷನ್’ ಸೌಲಭ್ಯವನ್ನ ಪ್ರಾರಂಭಿಸಿದೆ. ಈ ಮೂಲಕ, ಅಭ್ಯರ್ಥಿಗಳು ಇನ್ಮುಂದೆ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದಾಗಲೆಲ್ಲಾ ಮೂಲ ವಿವರಗಳನ್ನ ಭರ್ತಿ ಮಾಡಬೇಕಾಗಿಲ್ಲ.
ಮುಂಬರುವ ಸಮಯದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಒಟಿಆರ್ ಪ್ಲಾಟ್‌ಫಾರ್ಮ್‌ʼನಲ್ಲಿ ನೋಂದಾಯಿಸಿದ ನಂತರ ಮೂಲ ವೈಯಕ್ತಿಕ ಮಾಹಿತಿಯನ್ನ ನೀಡಬೇಕಾಗುತ್ತದೆ.

ಒಟಿಆರ್ ಪ್ಲಾಟ್ಫಾರ್ಮ್ ಸಮಯವನ್ನ ಉಳಿಸುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
‘ಪ್ರತಿ ವರ್ಷ ಯುಪಿಎಸ್ಸಿ ನಡೆಸುವ ವಿವಿಧ ಪರೀಕ್ಷೆಗಳಿಗೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಈ ಪರೀಕ್ಷೆಗಳ ಮೂಲಕ, ಕೇಂದ್ರ ಸರ್ಕಾರದ ಇಲಾಖೆಗಳು / ಸಂಸ್ಥೆಗಳಿಗೆ ಅಧಿಕಾರಿಗಳನ್ನ ಆಯ್ಕೆ ಮಾಡಲಾಗುತ್ತದೆ. ಒಟಿಆರ್ ಪ್ಲಾಟ್ಫಾರ್ಮ್ ಸಮಯವನ್ನ ಉಳಿಸುತ್ತದೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನ ಸುಲಭಗೊಳಿಸುತ್ತದೆ.

ಯುಪಿಎಸ್ಸಿ ಪ್ರಕಾರ, ಅಭ್ಯರ್ಥಿಯ ನೋಂದಣಿ ಪೂರ್ಣಗೊಂಡ ನಂತರ, ಅವರ ಮಾಹಿತಿಯನ್ನ ಆಯೋಗದ ಸರ್ವರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆಗಾಗಿ ಆನ್ಲೈನ್ ಅರ್ಜಿಯನ್ನ ಭರ್ತಿ ಮಾಡಿದಾಗ, ಅವರ ಮಾಹಿತಿ ಸ್ವಯಂಚಾಲಿತವಾಗಿ ಅಲ್ಲಿಗೆ ಬರುತ್ತದೆ.

ಆಯೋಗದ ವೆಬ್ಸೈಟ್‌ನಲ್ಲಿ 24 ಗಂಟೆಗಳ ಕಾಲ ಒಟಿಆರ್ ಲಭ್ಯ
ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ವೈಯಕ್ತಿಕ ಮಾಹಿತಿಯನ್ನ ಭರ್ತಿ ಮಾಡಲು ಸಮಯವನ್ನ ಉಳಿಸುವುದರಿಂದ ಮತ್ತು ವಿವರಗಳನ್ನ ಭರ್ತಿ ಮಾಡುವಾಗ ತಪ್ಪು ಮಾಹಿತಿಯನ್ನ ನಮೂದಿಸುವುದನ್ನ ತಪ್ಪಿಸುವುದರಿಂದ ಅಭ್ಯರ್ಥಿಗಳಿಗೆ ಒಟಿಆರ್ ತುಂಬಾ ಉಪಯುಕ್ತವಾಗಲಿದೆ ಎಂದು ಆಯೋಗ ಹೇಳಿದೆ. ‘ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ಕೇಂದ್ರ ಲೋಕಸೇವಾ ಆಯೋಗವು ಒಂದು ಬಾರಿಯ ನೋಂದಣಿ ವೇದಿಕೆಯನ್ನ ಪ್ರಾರಂಭಿಸಿದೆ. ಇದು ಆಯೋಗದ ವೆಬ್ಸೈಟ್‌ನಲ್ಲಿ ದಿನದ 24 ಗಂಟೆಯೂ ಲಭ್ಯವಿರುತ್ತದೆ’ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಪರೀಕ್ಷೆಗೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಶೇಕಡಾ 70ರಷ್ಟು ಮಾಹಿತಿಯನ್ನ ಸ್ವಯಂಚಾಲಿತವಾಗಿ ನಮೂದಿಸುವುದರಿಂದ, ಸಮಯವನ್ನ ಉಳಿಸಲಾಗುವುದು ಎಂದು ಅದು ಹೇಳಿದೆ. ಸಾರ್ವಜನಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳ ಪಟ್ಟಿ ಮತ್ತು ಮಾಹಿತಿಯನ್ನು ಯುಪಿಎಸ್ಸಿ ಬಿಡುಗಡೆ ಮಾಡಿದೆ.

ಸಾರ್ವಜನಿಕ ಸೇವಾ ಪರೀಕ್ಷೆಯನ್ನು ಪ್ರತಿ ವರ್ಷ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ, ಇದರಲ್ಲಿ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವೂ ಸೇರಿದೆ. ಇದರ ಮೂಲಕ, ಅಧಿಕಾರಿಗಳನ್ನು ಭಾರತೀಯ ಆಡಳಿತ ಸೇವೆ ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ (ಇತ್ಯಾದಿಗಳಿಗೆ ಆಯ್ಕೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...