Saturday, March 21, 2026
Saturday, March 21, 2026

ಭದ್ರಾವತಿ ಘಟನೆ ಕೋಮು ಭಾವನೆಯದ್ದಲ್ಲ.ಈಶ್ವರಪ್ಪಗೆ ಸಂಗಮೇಶ್ ಸವಾಲ್

Date:

ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಬಿಜೆಪಿ ಕೋಮು ಬಣ್ಣ ಬಳಿಯುತ್ತಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ. ಕೆ.ಸಂಗಮೇಶ್ವರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಯುವಕ ಸುನೀಲ್ ಮತ್ತು ಆರೋಪಿ ಮುಬಾರಕ್ ಇಬ್ಬರೂ ಸ್ನೇಹಿತರು.ಜೂಜಾಟದ ವಿಚಾರವಾಗಿ ಸುನೀಲ್ ಮೇಲೆ ಮುಬಾರಕ್ ಹಲ್ಲೆ ನಡೆಸಿದ್ದಾನೆ. ಸುನೀಲ್ ಮೂಗಿಗೆ ಸಣ್ಣಪುಟ್ಟ ಗಾಯವಾಗಿದ್ದು ಬಿಟ್ಟರೆ ಯಾವುದೇ ಗಂಭೀರ ಗಾಯವಾಗಿಲ್ಲ. ಆದರೆ, ಭದ್ರಾವತಿಯಲ್ಲಿ ಶಾಂತಿ ಕದಡಲು ಬಿಜೆಪಿ ಮತ್ತು ಬಜರಂಗದಳ ಕೋಮು ಬಣ್ಣ ಬಳಿಯುತ್ತಿದೆ. ಆದರೆ, ಇಲ್ಲಿ ಎಲ್ಲಾ ಧರ್ಮದವರು ಶಾಂತಿಯುತವಾಗಿ ವಾಸಿಸುತ್ತಿರುವುದರಿಂದ ಇಂತಹ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

ಭದ್ರಾವತಿಯಲ್ಲಿ ನಡೆದ ಘಟನೆ ಕೋಮುವಾದ ಎಂದು ದೇವರ ಮುಂದೆ ಸಾಕ್ಷಿ ಹೇಳುವಂತೆ ಈಶ್ವರಪ್ಪಗೆ ಸಂಗಮೇಶ್ವರ್ ಸವಾಲು ಹಾಕಿದ್ದಾರೆ. ಹಲವಾರು ಟಿವಿ ಚಾನೆಲ್‌ಗಳು ಕೂಡ ಭದ್ರಾವತಿ ಘಟನೆಯನ್ನು ಅನಗತ್ಯವಾಗಿ ಪ್ರಚಾರ ಮಾಡುತ್ತಿವೆ. ಬಿಜೆಪಿ ನಾಯಕರು ಕೋಮುವಾದಿ ರಾಜಕಾರಣ ಮಾಡುವ ಬದಲು ರಾಜ್ಯದ ಅಭಿವೃದ್ಧಿ ಮಾಡುವ ಮೂಲಕ ಜನರ ಹೃದಯ ಗೆಲ್ಲುವಂತೆ ಸೂಚಿಸುತ್ತೇನೆ ಎಂದರು.

ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಬಿಜೆಪಿ ಕೋಮು ಬಣ್ಣ ಬಳಿಯುತ್ತಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ. ಕೆ.ಸಂಗಮೇಶ್ವರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಯುವಕ ಸುನೀಲ್ ಮತ್ತು ಆರೋಪಿ ಮುಬಾರಕ್ ಇಬ್ಬರೂ ಸ್ನೇಹಿತರು.ಜೂಜಾಟದ ವಿಚಾರವಾಗಿ ಸುನೀಲ್ ಮೇಲೆ ಮುಬಾರಕ್ ಹಲ್ಲೆ ನಡೆಸಿದ್ದಾನೆ. ಸುನೀಲ್ ಮೂಗಿಗೆ ಸಣ್ಣಪುಟ್ಟ ಗಾಯವಾಗಿದ್ದು ಬಿಟ್ಟರೆ ಯಾವುದೇ ಗಂಭೀರ ಗಾಯವಾಗಿಲ್ಲ. ಆದರೆ, ಭದ್ರಾವತಿಯಲ್ಲಿ ಶಾಂತಿ ಕದಡಲು ಬಿಜೆಪಿ ಮತ್ತು ಬಜರಂಗದಳ ಕೋಮು ಬಣ್ಣ ಬಳಿಯುತ್ತಿದೆ. ಆದರೆ, ಇಲ್ಲಿ ಎಲ್ಲಾ ಧರ್ಮದವರು ಶಾಂತಿಯುತವಾಗಿ ವಾಸಿಸುತ್ತಿರುವುದರಿಂದ ಇಂತಹ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

ಭದ್ರಾವತಿಯಲ್ಲಿ ನಡೆದ ಘಟನೆ ಕೋಮುವಾದ ಎಂದು ದೇವರ ಮುಂದೆ ಸಾಕ್ಷಿ ಹೇಳುವಂತೆ ಈಶ್ವರಪ್ಪಗೆ ಸಂಗಮೇಶ್ವರ್ ಸವಾಲು ಹಾಕಿದ್ದಾರೆ. ಹಲವಾರು ಟಿವಿ ಚಾನೆಲ್‌ಗಳು ಕೂಡ ಭದ್ರಾವತಿ ಘಟನೆಯನ್ನು ಅನಗತ್ಯವಾಗಿ ಪ್ರಚಾರ ಮಾಡುತ್ತಿವೆ. ಬಿಜೆಪಿ ನಾಯಕರು ಕೋಮುವಾದಿ ರಾಜಕಾರಣ ಮಾಡುವ ಬದಲು ರಾಜ್ಯದ ಅಭಿವೃದ್ಧಿ ಮಾಡುವ ಮೂಲಕ ಜನರ ಹೃದಯ ಗೆಲ್ಲುವಂತೆ ಸೂಚಿಸುತ್ತೇನೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಶಿವಮೊಗ್ಗದಿಂದ ದಂಪತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆಮ

Shivamogga News ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 2ನೇ...

Shivamogga News ಪಂಚಾಂಗ ಶ್ರವಣವು ಪುಣ್ಯಪ್ರದ. ಕೆಟ್ಟಸ್ವಪ್ನವನ್ನು ದೂರಮಾಡುತ್ತದೆ- “ಕಗ್ಗ” ಜಿ.ಎಸ್.ನಟೇಶ್.

Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ...

Rangayana, Shivamogga ಚಿಣ್ಣರ ಸಿಹಿಮೊಗೆ ಬೇಸಿಗೆ ಶಿಬಿರದಲ್ಲಿ ನಾಟಕ ನಿರ್ದೇಶಕ ಮತ್ತು ಜನಸಹಾಯಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳ ಆಹ್ವಾನ.

Rangayana ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ...