Friday, December 19, 2025
Friday, December 19, 2025

ಅಕ್ಷರ ಕಲಿಕೆ ಚಿತ್ರರೂಪದಲ್ಲಿದ್ದರೆ ಮಕ್ಕಳಿಗೆ ಸುಲಭ- ಮಂಜುನಾಥ್

Date:

ಅಕ್ಷರಗಳು ಭಾಷೆಯ ದೃಶ್ಯ ರೂಪ ಗಳಾಗಿದೆ. ಅಕ್ಷರಗಳ ಬರವಣಿಗೆಯನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವಾಗ ಚಿತ್ರ ರೂಪದಲ್ಲಿ ಹೇಳಿ ಕೊಟ್ಟಲ್ಲಿ ಮಕ್ಕಳಿಗೆ ಕಷ್ಟವಾಗದೇ ಇಷ್ಟವಾಗುತ್ತದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಅವರು ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆ ಸಮೀಪದ ಅವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ಪುಟ್ಟ ಮಕ್ಕಳಿಗೆ ಯಾವುದೇ ಭಾಷೆಯ ವರ್ಣಮಾಲೆ ಬರವಣಿಗೆ ಕಲಿಸಿಕೊಡುವಾಗ ಅಕ್ಷರಗಳನ್ನು ಆ ಅಕ್ಷರದ ರೂಪಕ್ಕೆ ಹೋಲಿಕೆಯಾಗುವ ಹಣ್ಣು ತರಕಾರಿ ಪ್ರಾಣಿ ಪಕ್ಷಿ ಅಥವಾ ಯಾವುದೇ ವಸ್ತುಗಳ ರೂಪಕ್ಕೆ ಹೋಲಿಸಿ ಬರೆದು ತೋರಿಸಿದಾಗ ಇಷ್ಟವಾಗುತ್ತದೆ. ಇದರಿಂದ ಅಕ್ಷರ ಅಭ್ಯಾಸದಲ್ಲಿ ಮಕ್ಕಳಿಗೆ ಆಸಕ್ತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳವರು ಅಕ್ಷರದಿಂದ ವಿದ್ಯೆ, ವಿದ್ಯೆಯಿಂದ ಜ್ಞಾನ,ಜ್ಞಾನದಿಂದ ಬದುಕಿನ ಸಾರ್ಥಕತೆ, ಆದ್ದರಿಂದ, ಅಕ್ಷರಾಭ್ಯಾಸವು ಪ್ರಮುಖ ಘಟ್ಟವಾಗಿದೆ ಎಂದು ಹೇಳಿದ್ದಾರೆ.

ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧ ಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತುಗಳನ್ನಾಡಿದರು.

ಸಂಸ್ಥೆಯ ಶಿವಮೂರ್ತಿ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಛಾಯಾದೇವಿ, ಸಂಸ್ಥೆಯ ನಿರ್ದೇಶಕಿ ಸುಗಲಾ ದೇವಿ, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದು. ಗುಣಶೀಲ ಪ್ರಾರ್ಥನೆ ಹಾಡಿದರೆ ಸಹಶಿಕ್ಷಕಿ ನೇತ್ರಾವತಿ ಸ್ವಾಗತ ಕೋರಿದರು. ಅನ್ನಪೂರ್ಣ ವಂದನೆ ಸಮರ್ಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...