Sunday, April 26, 2026
Sunday, April 26, 2026

ದೇಶದಲ್ಲಿ ಮತ್ತೆ ಏರಿಕೆ ಕಂಡ ಕೋವಿಡ್ ಸೋಂಕು

Date:

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 21,566 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. 45 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,38,25,185ಕ್ಕೆ ಏರಿಕೆಯಾಗಿದೆ.

ಇದುವರೆಗೆ, 5,25,870 ಮಂದಿ ಸಾವನ್ನಪ್ಪಿದ್ದಾರೆ.
4,31,50,434 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 1,48,881 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 4.25 ರಷ್ಟಿದೆ.

ಪಶ್ಚಿಮ ಬಂಗಾಳದಲ್ಲಿ 28,399, ಕೇರಳದಲ್ಲಿ 22,318, ತಮಿಳುನಾಡಿನಲ್ಲಿ 16,702, ಮಹಾರಾಷ್ಟ್ರದಲ್ಲಿ 14,636, ಕರ್ನಾಟಕದಲ್ಲಿ 7,866 ಸಕ್ರಿಯ ಪ್ರಕರಣಗಳಿವೆ.

ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆ ಮತ್ತು ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಬುಧವಾರ 32,363 ಪರೀಕ್ಷೆಗಳನ್ನು ನಡೆಸಲಾಗಿದೆ. 1,478 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 4.56ರಷ್ಟಿದೆ. 27 ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 1,251 ಮಂದಿ ಕೊರೋನಾ ಪೀಡಿತರಾಗಿದ್ದಾರೆ.

ದೇಶದಾದ್ಯಂತ ಒಟ್ಟು 200.92 ಕೋಟಿ ಡೋಸ್ ಕೊರೋನಾ ಲಸಿಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಒಳಮೀಸಲಾತಿ ಹಂಚಿಕೆ: ಎಲ್ಲಾ ಉಪಜಾತಿಗಳಿಗೂ ಅರ್ಹ ಪ್ರಾತಿನಿಧ್ಯ ನೀಡಲಾಗಿದೆ- ಸಿದ್ಧರಾಮಯ್ಯ.

CM Siddharamaiah ಒಳಮೀಸಲಾತಿ ಹಂಚಿಕೆ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ...

B.Y. Raghavendra ಸಾಗರ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ಪ್ರಸ್ತಾವನೆ: ಸ್ಪಷ್ಟ ವಿರೋಧವಿದೆ- ಸಂಸದ ರಾಘವೇಂದ್ರ

B.Y. Raghavendra "ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ; ಜನರು...

Klive Special Article ಕೆ ಲೈವ್ ವಿಶೇಷ. ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನಾಚರಣೆ. ...

Klive Special Article  ಲೇಖಕರು: ಅಡ್ವೋಕೇಟ್ ಸಾಧ್ವಿ ಸಿ. ಕಾಂತ್, ಎಸ್.ಸಿ.ಕೆ...

Pailwaan ಸೊರಬದಲ್ಲಿ ಆಕರ್ಷಕ ಕುಸ್ತಿ ಪಂದ್ಯ. ಹಾವೇರಿ ಪೈಲ್ವಾನ್ ವಿಜಯ್ ಗೆ ” ಪೈಲ್ವಾನ್ ಲಿಂಗರಾಜ್ ಪ್ರಶಸ್ತಿ.

Pailwaan ತಾಲೂಕಿನ ಹುಲ್ತಿಕೊಪ್ಪ ಗ್ರಾಮದಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಅಂಗವಾಗಿ...