Thursday, August 13, 2026
Thursday, August 13, 2026

ರಷ್ಯಾ ದಿಗ್ಬಂಧನದಿಂದಉಕ್ರೇನ್ ಜನಕ್ಕೆ ಹಸಿವಿನ ಬಳಲಿಕೆ

Date:

ಉಕ್ರೇನ್‌ನ ಬಂದರುಗಳಿಗೆ ರಷ್ಯಾದ ದಿಗ್ಬಂಧನವು ಹಸಿವಿನಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಧಾನ್ಯ ಪೂರೈಕೆಗೆ ಬೆದರಿಕೆ ಒಡ್ಡಿದೆ ಎಂದು ಯುರೋಪಿಯನ್ ಯೂನಿಯನ್ ವಿದೇಶಿ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಅವರು ಎಚ್ಚರಿಸಿದ್ದಾರೆ.

ಇದು ಹಲವರಿಗೆ ಬದುಕು ಮತ್ತು ಸಾವಿನ ವಿಷಯವಾಗಿದೆ. ರಷ್ಯಾ ದಿಗ್ಬಂಧನ ತೆರವುಗೊಳಿಸಿ ಉಕ್ರೇನ್‌ನ ಧಾನ್ಯ ರಫ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಸುದ್ಧಿಗೋಷ್ಟಿಯಲ್ಲಿ ಬೊರೆಲ್ ಅವರು ಆಗ್ರಹಿಸಿದ್ದಾರೆ.

ಉಕ್ರೇನ್‌ನ ಬಂದರಿನ ಮೇಲಿನ ದಿಗ್ಬಂಧನವನ್ನು ಅಂತ್ಯಗೊಳಿಸುವ ಒಪ್ಪಂದ ರೂಪಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಧಾನಕಾರರು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ವಿಶ್ವಸಂಸ್ಥೆ ಮತ್ತು ಟರ್ಕಿಯ ನಿಯೋಗದ ಜತೆ ಬುಧವಾರ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ನಂತರ ರಷ್ಯಾವು ಉಕ್ರೇನ್‌ನ ಪ್ರಮುಖ ಆಹಾರಧಾನ್ಯ ರಫ್ತಿನ ಕೇಂದ್ರವಾಗಿರುವ ಒಡೆಸಾ ಬಂದರು ಸಹಿತ ಕಪ್ಪುಸಮುದ್ರದ ಹಲವು ಬಂದರುಗಳನ್ನು ವಶಪಡಿಸಿಕೊಂಡು ಆಹಾರ ಧಾನ್ಯದ ರಫ್ತಿಗೆ ತಡೆಯೊಡ್ಡಿದೆ.

ರಷ್ಯಾದ ಆಕ್ರಮಣವನ್ನು ತಡೆಯಲು ತನ್ನ ಕೆಲವು ಬಂದರುಗಳ ಮಾರ್ಗವನ್ನು ಉಕ್ರೇನ್ ತಡೆಹಿಡಿದಿದೆ. ವಿಶ್ವದ ಧಾನ್ಯದ ಬಾಸ್ಕೆಟ್ ಎಂದು ಕರೆಸಿಕೊಳ್ಳುವ ಉಕ್ರೇನ್ ವಿಶ್ವಕ್ಕೆ , ಅದರಲ್ಲೂ ಮುಖ್ಯವಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಿಗೆ ಪ್ರಮುಖ ಧಾನ್ಯ ಪೂರೈಕೆದಾರನಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಆಹಾರದ ಕೊರತೆಯಿರುವುದು ಆತಂಕಕಾರಿ ವಿಷಯವಾಗಿದೆ ಮತ್ತು ಉಕ್ರೇನ್‌ನಿಂದ ಆಹಾರ ರಫ್ತಿಗೆ ರಷ್ಯಾ ತಡೆಯೊಡ್ಡಿರುವುದು ಆಹಾರದ ಕೊರತೆಗೆ ಕಾರಣವಾಗಿದೆ ಎಂದು ಬೊರೆಲ್ ಅವರು ಹೇಳಿದ್ದಾರೆ.

ರಷ್ಯಾದ ಆಕ್ರಮಣವನ್ನು ವಿರೋಧಿಸಿ ವಿಧಿಸಲಾಗಿರುವ ನಿರ್ಬಂಧದಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಡೆಯಲಿರುವ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಬೊರೆಲ್ ಬ್ರಸೆಲ್ಸ್‌ಗೆ ಆಗಮಿಸಿದ್ದಾರೆ. ಉಕ್ರೇನ್ ಬಂದರಿನಲ್ಲಿರುವ ತಡೆ ನಿವಾರಣೆಯ ಬಗ್ಗೆ ಈ ವಾರದಲ್ಲಿ ಟರ್ಕಿಯಲ್ಲಿ ನಡೆಯುವ ಸಭೆಯಲ್ಲಿ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ. ಇದು ಸಾವಿರಕ್ಕೂ ಅಧಿಕ ಜನರ ಬದುಕಿನ ಪ್ರಶ್ನೆಯಾಗಿದೆ. ಇದು ರಾಜತಾಂತ್ರಿಕ ಮೇಲಾಟದ ವಿಷಯವಲ್ಲ ಎಂದು ಬೊರೆಲ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...