Thursday, December 11, 2025
Thursday, December 11, 2025

ತೀವ್ರ ಮಳೆ ಕಾರಣ ಕೇದಾರನಾಥ್ ಯಾತ್ರೆನಿಲ್ಲಿಸಲಾಗಿದೆ

Date:

ಸೋನ್ ಪ್ರಯಾಗದಿಂದ ಮುಂದೆ ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ. ಅಹಿತಕರ ಘಟನೆಗಳ ಭೀತಿಯ ನಡುವೆ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಏತನ್ಮಧ್ಯೆ, ಅಮರನಾಥದ ಬಳಿಯ ನೂರಾರು ಡೇರೆಗಳನ್ನು ಹಠಾತ್ ಪ್ರವಾಹವು ಕೊಚ್ಚಿಕೊಂಡು ಹೋದ ನಂತರ ಹದಿನಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಹಿಮಾಲಯದ ಪರ್ವತದ ಗುಹೆಯಲ್ಲಿ ನೆಲೆಗೊಂಡಿರುವ ದೂರದ ಅಮರನಾಥ ದೇವಾಲಯದ ಹತ್ತಿರ ಸುಮಾರು 10,000 ಜನರು ಬೀಡುಬಿಟ್ಟಿದ್ದರು. ಆಗ ಇದ್ದಕ್ಕಿದ್ದಂತೆ ಮೇಘಸ್ಫೋಟವು ಪ್ರಳಯಕ್ಕೆ ಕಾರಣವಾಯಿತು.

ಹೆಲಿಕಾಫ್ಟರ್ ವಿಮಾನಗಳು ಸಾವನ್ನಪ್ಪಿದವರನ್ನು ಸ್ಥಳಾಂತರಿಸೋ ಕಾರ್ಯದಲ್ಲಿ, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅಜ್ಞಾತ ಸಂಖ್ಯೆಯ ಭಯಭೀತರಾದ ಮತ್ತು ಗಾಯಗೊಂಡ ಯಾತ್ರಾರ್ಥಿಗಳು ದೇವಾಲಯದ ಉತ್ತರಕ್ಕಿರುವ ಬಾಲ್ಟಾಲ್ ಬೇಸ್ ಕ್ಯಾಂಪ್ನಿಂದ ಹೊರಟಿದ್ದರು.ನಾವು ಇಲ್ಲಿಯವರೆಗೆ 16 ಶವಗಳನ್ನು ಕಂಡುಕೊಂಡಿದ್ದೇವೆ. ಕನಿಷ್ಠ 40 ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ಸ್ಪಂದನಾ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Human Rights Commission ಹಕ್ಕು-ಕರ್ತವ್ಯ ಪಾಲನೆಯೊಂದಿಗೆ ಇತರರ ಹಕ್ಕುಗಳನ್ನು ಗೌರವಿಸಿ : ಹೇಮಂತ್ ಎನ್

Human Rights Commission ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು,...

ಅಬಕಾರಿ ದಾಳಿ: 51.75 ಲೀ ಗೋವಾ ಮದ್ಯ ಪತ್ತೆ

ಶಿವಮೊಗ್ಗ ತಾಲೂಕು ಗೋವಿಂದಪುರ ಗ್ರಾಮದ ಶಿವಕುಮಾರ್ ಬಿನ್ ವರದರಾಜ್ ಇವರಿಗೆ ಸೇರಿದ...

Sahyadri Narayana Hospital ವೈದ್ಯರ ಚಿಕಿತ್ಸೆಯಿಂದ ತಾಯಿಗೆ ದೃಷ್ಟಿ, ಅವಧಿಪೂರ್ವ ಮಗುವಿಗೆ ಜೀವದಾನ

Sahyadri Narayana Hospital 25 ವರ್ಷದ ಯುವತಿ ಗಂಡನ ಜೊತೆ ಸಂತೋಷವಾಗಿದ್ದಳು....

Akashavani Bhadravati ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್ ಮತ್ತು ಬದುಕು ಜಟಕಾಬಂಡಿ ವಿಶೇಷ ಕಾರ್ಯಕ್ರಮಗಳ ಪ್ರಸಾರ

Akashavani Bhadravati ಡಿ 15 ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಪ್ರತಿದಿನ...