ಕಾಮಗಾರಿ ಕಾರಣದಿಂದಾಗಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ರೈಲುಗಳ ಸಂಚಾರ ಕಡಿತಗೊಂಡಿತ್ತು. ಇದೀಗ ಇದೇ ಜುಲೈ 9 ಹಾಗೂ 10 ರಂದು ರೈಲುಗಳು ಈ ಎಲ್ಲಾ ಪ್ರದೇಶಗಳಲ್ಲಿ ಮತ್ತೆ ಓಡಾಟ ಆರಂಭಿಸಲಿದೆ. ಮತ್ತೆ ಓಡಾಡಲಿರುವ ರೈಲುಗಳ ವಿವರ ಇಲ್ಲಿದೆ.
ಮೈಸೂರು ವಿಭಾಗದ ಬಾಣಾವರ ರೈಲು ಮಾರ್ಗದಲ್ಲಿ ನಡೆಯುತ್ತಿದ್ದ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆ ಭಾಗಶಃ ಹಾಗೂ ಪೂರ್ಣವಾಗಿ ಸ್ಥಗಿತಗೊಂಡಿದ್ದ ರೈಲುಗಳ ಪುನರ್ ಸಂಚಾರವನ್ನು ಆರಂಭಿಸುವುದಾಗಿ ನೈಋತ್ಯ ರೈಲ್ವೇ ವಲಯವು ತಿಳಿಸಿದೆ.
ಈ ಮಾರ್ಗದಲ್ಲಿ ರೈಲುಗಳ ಓಡಾಟ ಆರಂಭವಾಗುವುದರ ಜೊತೆಗೆ ಶಿವಮೊಗ್ಗ ನಗರದಿಂದ ಓಡಾಡುತ್ತಿದ್ದ ರೈಲುಗಳು ಮತ್ತೆ ಸಂಚಾರ ಆರಂಭಿಸಲಿದೆ.
ಹೀಗಾಗಿ ಪ್ರಯಾಣಿಕರು ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು ನಡುವೆ ಓಡಾಡುತ್ತಿದ್ದ ರೈಲುಗಳಲ್ಲಿ ಸಂಚಾರ ಮಾಡಬಹುದಾಗಿದೆ.
ತುಮಕೂರು- ಶಿವಮೊಗ್ಗ ದಿನಂಪ್ರತಿ ಓಡಾಡುತ್ತಿದ್ದ ಎಕ್ಸ್ ಪ್ರೆಸ್ ರೈಲು , ಬೆಂಗಳೂರು- ಶಿವಮೊಗ್ಗ ನಡುವೆ ಓಡಾಡುತ್ತಿದ್ದ ಜನ್ಮ ಶತಾಬ್ದಿ ರೈಲು ಓಡಾಟ ನಡೆಸಲಿದೆ.
ಇದೇ ಜುಲೈ 10 ರಂದು ಈ ಪ್ರದೇಶಗಳಲ್ಲಿ ರೈಲು ಸಂಚಾರ ಮರು ಓಡಾಟ ಆರಂಭಿಸಲಿದೆ. ಶಿವಮೊಗ್ಗ ನಗರದಿಂದ ತುಮಕೂರು ನಡುವೆ ಸಂಚರಿಸುತ್ತಿದ್ದ ರೈಲು, ಅರಸೀಕೆರೆ – SSS ಹುಬ್ಬಳ್ಳಿ ಎಕ್ಸ್ ಪ್ರೆಸ್, ಶಿವಮೊಗ್ಗ ನಗರದಿಂದ ಬೆಂಗಳೂರು ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ಓಡಾಟ ನಡೆಸಲಿದೆ.
ಇದೇ ಜುಲೈ 9 ರಂದು ಹರಿಹರದಿಂದ ದಾವಣಗೆರೆ, ಶಿವಮೊಗ್ಗ ನಗರದಿಂದ ಬೆಂಗಳೂರು ನಡುವೆ ಸಂಚರಿಸುವ ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ರೈಲು , ಹುಬ್ಬಳ್ಳಿ- ಅರಸೀಕೆರೆ ಎಕ್ಸ್ ಪ್ರೆಸ್ ಈ ಎಲ್ಲಾ ರೈಲುಗಳು ಹಿಂದೆ ಯಾವ ಸಮಯಕ್ಕೆ ಓಡಾಟ ನಡೆಸುತ್ತಿದ್ದವೋ ಅದೇ ಸಮಯಕ್ಕೆ ಓಡಾಟ ನಡೆಸಲಿರುವುದಾಗಿ ರೈಲ್ವೇ ಇಲಾಖೆಯು ತಿಳಿಸಿದೆ.
ರೈಲ್ವೇ ಸಂಬಂಧಿತ ಯಾವುದೇ ದೂರು, ಸಲಹೆ, ಮಾಹಿತಿ ಹಾಗೂ ಇನ್ನಿತರ ವಿಚಾರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 139 ಸಂಪರ್ಕಿಸಬಹುದಾಗಿದೆ.