Wednesday, June 24, 2026
Wednesday, June 24, 2026

ಮಹಾ ಅಧಿವೇಶನದಲ್ಲಿ ಸಿಎಂ ಶಿಂಧೆ ಭಾವೋದ್ವೇಗ ಭಾಷಣ

Date:

ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದ ಬಳಿಕ ಮುಖ್ಯಮಂತ್ರಿಯಾಗಿ ತನ್ನ ಮೊದಲ ಭಾಷಣ ಮಾಡಿದ ಏಕನಾಥ ಶಿಂದೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು.
ತನ್ನ ಬಂಡಾಯಕ್ಕಾಗಿ ತನ್ನ ಕುಟುಂಬಕ್ಕೆ ಬೆದರಿಕೆಗಳು ಬಂದಿದ್ದವು ಎಂದ ಶಿಂದೆ ಮೃತಪಟ್ಟಿರುವ ತನ್ನಿಬ್ಬರು ಮಕ್ಕಳನ್ನು ನೆನೆದುಕೊಂಡು ದುಃಖವನ್ನು ತಡೆಯದೆ ಉಮ್ಮಳಿಸಿದರು.

ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದ್ದರು. ನನ್ನ ತಂದೆ ಬದುಕಿದ್ದಾರೆ,ತಾಯಿ ಮೃತ ಪಟ್ಟಿದ್ದಾರೆ. ನಾನು ನನ್ನ ಹೆತ್ತವರಿಗೆ ಹೆಚ್ಚಿನ ಸಮಯ ನೀಡಲಾಗಲಿಲ್ಲ. ನಾನು ಮನೆಗೆ ಮರಳಿದಾಗ ಅವರು ಮಲಗಿರುತ್ತಿದ್ದರು,ನಾನು ಬೆಳಿಗ್ಗೆ ಮಲಗಿದ್ದಾಗ ಅವರು ಕೆಲಸಕ್ಕೆ ಹೋಗಿರುತ್ತಿದ್ದರು.

ನನ್ನ ಮಗ ಶ್ರೀಕಾಂತನಿಗೆ ಹೆಚ್ಚು ಸಮಯ ನೀಡಲು ನನಗೆ ಸಾಧ್ಯವಾಗಿರಲಿಲ್ಲ. ನನ್ನ ಇಬ್ಬರು ಮಕ್ಕಳು ಮೃತಪಟ್ಟಾಗ ಶಿವಸೇನೆಯ ಹಿರಿಯ ನಾಯಕ ಆನಂದ ನನಗೆ ಸಾಂತ್ವನ ಹೇಳಿದ್ದರು. ಬದುಕಿರುವುದರಲ್ಲಿ ಏನು ಅರ್ಥವಿದೆ ಎಂದು ನಾನು ಯೋಚಿಸುತ್ತಿದ್ದೆ. ಕಣ್ಣೀರನ್ನು ಒರೆಸಿಕೋ,ಇತರರ ಕಣ್ಣೀರನ್ನೂ ಒರೆಸು ಎಂದು ಹೇಳಿದ್ದಾರೆ.

ನಾನು ಚೇತರಿಸಿಕೊಳ್ಳಲು ನೆರವಾಗಿದ್ದರು. ಹಾಗೂ ವಿಧಾನಸಭೆಯಲ್ಲಿ ನನ್ನನ್ನು ಶಿವಸೇನೆ ನಾಯಕನನ್ನಾಗಿ ಮಾಡಿದ್ದರು ಎಂದು ಶಿಂದೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kodachadri Chits Pvt. Ltd ಗ್ರಾಹಕರೇ ಕೊಡಚಾದ್ರಿಚಿಟ್ಸ್ ನ ಹಿಂದಿರುವ ಶಕ್ತಿ- ಪರಶುರಾಮ್

Kodachadri Chits Pvt. Ltd ಕೊಡಚಾದ್ರಿ ಚಿಟ್ಸ್‌ನ ಯಶಸ್ಸಿನ ಹಿಂದಿನ ನಿಜವಾದ...

Rotary Club Shivamogga ಮಲೇರಿಯಾವನ್ನ ವೈಜ್ಞಾನಿಕ ಕ್ರಮಗಳಿಂದ ನಿರ್ಮೂಲನೆ ಮಾಡಲು ಸಾಧ್ಯ. ಈ ಕಾರ್ಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅನಿವಾರ್ಯ- ಡಾ.ಗುಡದಪ್ಪ ಕಸಬಿ

Rotary Club Shivamogga "ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುವುದರಿಂದ ಸಾರ್ವಜನಿಕರಲ್ಲಿ...

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...