Sunday, December 7, 2025
Sunday, December 7, 2025

ರಾಷ್ಟ್ರಾಧ್ಯಕ್ಷರನ್ನ ಅವಿರೋಧ ಆಯ್ಕೆ ಮಾಡುವುದು ಉತ್ತಮ- ಯಶ್ವಂತ್ ಸಿನ್ಹಾ

Date:

ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆ ಮತಯಾಚನೆ ನಡೆಸುತ್ತಿರುವ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ಛತ್ತೀಸ್ಗಢಕ್ಕೆ ಭೇಟಿ ನೀಡಿ ಅಲ್ಲಿನ ಶಾಸಕರೊಂದಿಗೆ ಸಭೆ ನಡೆಸಿ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಹುದ್ದೆ ಅತ್ಯಂತ ಘನತೆಯುಳ್ಳದ್ದು. ಆ ಸ್ಥಾನಕ್ಕೆ ಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಈ ದೇಶಕ್ಕೆ ಮೂಕ ರಾಷ್ಟ್ರಪತಿಗಳು ಬೇಕಿಲ್ಲ. ಅಧ್ಯಕ್ಷರು ಸರ್ಕಾರದ ಕೈಗೊಂಬೆಯಾಗಬಾರದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿ ಎಂದರು.

ರಾಷ್ಟ್ರಪತಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸರ್ಕಾರ ಘನತೆ ಮೆರೆಯಬೇಕಿತ್ತು. ಆ ಸ್ಥಾನದಲ್ಲಿದ್ದವರಿಗೆ ಸಂವಿಧಾನದತ್ತವಾದ ಅಧಿಕಾರವಿದೆ. ಈ ಹಿಂದಿನ ಕೆಲ ಅಧ್ಯಕ್ಷರು ಕಚೇರಿಯನ್ನೇ ಬಿಟ್ಟು ಹೊರಬಾರದೇ ಇದ್ದುದನ್ನು ನಾವು ನೋಡಿದ್ದೇವೆ. ಮಾತನಾಡದ ಅಧ್ಯಕ್ಷರು ಈ ದೇಶಕ್ಕೆ ಬೇಡ. ನಿಯೋಜಿಯ ಜವಾಬ್ದಾರಿಯನ್ನು ಪೂರೈಸುವವರು ಅಧ್ಯಕ್ಷರಾಗಬೇಕು ಎಂದರು.

ರಾಷ್ಟ್ರಪತಿ ಚುನಾವಣೆಯ ಮತದಾನವು ಜುಲೈ 18 ರಂದು ನಡೆಯಲಿದೆ. 21ರಂದು ಮತ ಎಣಿಕೆ ಜರುಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...

DC Shivamogga ಗಮನಿಸಿ !. ವಿನೋಬಾನಗರದಲ್ಲಿ ಏಕಮುಖ ವಾಹನ ಸಂಚಾರ ಯಾವ ರಸ್ತೆಯಲ್ಲಿ? ಮಾಹಿತಿ ಇಲ್ಲಿದೆ

DC Shivamogga ವಿನೋಬನಗರ ಪೊಲೀಸ್ ಚೌಕಿ ಕಡೆಗಳಲ್ಲಿ ದಿನೇ ದಿನೇ ವಾಹನ...