Sunday, December 7, 2025
Sunday, December 7, 2025

ಪದವಿ ಗಳಿಕೆ ಜೀವನದ ಸಾಧನೆಯ ಆರಂಭ ಆದರೆ ಕೊನೆಯಲ್ಲ

Date:

ಪದವಿಯಿಂದ ಜ್ಞಾನ ಪಡೆಯಬಹುದು ಆದರೆ ಕೌಶಲ್ಯ ಬೇಕೆಂದರೆ ಪ್ರಾಯೋಗಿಕಾನುಭವ ಅವಶ್ಯ, ಆದ್ದರಿಂದಲೇ ನೂತನ ಶಿಕ್ಷಣ ನೀತಿಯು ಕೌಶಲ್ಯಕ್ಕೆ ಮಹತ್ವ ಕೊಟ್ಟಿದೆ ಎಂದು ಅಂತರರಾಷ್ಟ್ರೀಯ ವ್ವಕ್ತಿತ್ವಾಭಿವೃಧ್ಧಿ ತರಬೇತುದಾರ ಆರ್.ಎ.ಚೇತನ್ ರಾಮ್ ಅಭಿಪ್ರಾಯಪಟ್ಟರು.

ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ಬಿಸಿಎ ಮತ್ತು ಬಿಕಾಂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಸಕಾರಾತ್ಮಕ ಬದಲಾವಣೆಯು ನಿರಂತರವಾಗಿರಬೇಕು, ಇದೇ ನಿಜವಾದ ಪರಿವರ್ತನೆ, ಜ್ಞಾನವೇ ಶಕ್ತಿಯಾದರೂ ಪರಿವರ್ತನೆಗೆ ಕೌಶಲ್ಯವೂ ಅತ್ಯವಶ್ಯ, ಪದವಿ ಗಳಿಕೆಯು ಜೀವನದ ಸಾಧನೆಯ ಕೊನೆಯಲ್ಲ, ಇದು ಆರಂಭದ ಆರಂಭವಷ್ಟೇ ಎಂದರು. ನಾವೂ ಬದುಕ ಬೇಕು ಉಳಿದವರಿಗೂ ಬದುಕಲು ಬಿಡಬೇಕು, ನಾವಷ್ಟೇ ಸಂತೋಷವಾಗಿದ್ದರೆ ಸಾಲದು, ಇತರರೂ ಸಂತೋಷವಾಗಿರುವಂತೆ ಮಾಡಬೇಕು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣನವರು ಮಾತನಾಡಿ ನೈಜತೆಯ ಅನುಭವದೊಂದಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಅವಕಾಶಗಳ ಲಭ್ಯತೆ ಸಾಧ್ಯ ಎಂದರು.

ಪ್ರಾಂಶುಪಾಲ ಡಾ.ಬಿ.ವೀರಪ್ಪನವರು ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಫ್ರೊ.ಡಿ.ಎಂ.ಸ್ವಾತಿ ಸ್ವಾಗತ ಕೋರಿದರು. ಫ್ರೊ.ಕೆ.ಎಸ್.ಮುನವಳ್ಳಿ ಮಠ್ ಹಾಗೂ ಫ್ರೊ.ಕೆ.ಸಿಧ್ಧಲಿಂಗಯ್ಯಸಿಧ್ಧಲಿಂಗಪ್ಪ ಮುಖ್ಯಅತಿಥಿಗಳ ಪರಿಚಯ ಮಾಡಿದರು.

ಫ್ರೊ.ಕೆ.ವೈ.ವೀರೇಂದ್ರ ಪ್ರತಿಜ್ಞಾವಿಧಿ ಬೋ ಧಿಸಿದರು. ದರ್ಶನ್,ಅನುಷಾ,ಅಭಿಷೇಕ್ ಮತ್ತು ನಯನಾ ನಿರೂಪಿಸಿದರೆ ಪ್ರಾರ್ಥನೆಯನ್ನು ಸಂಧ್ಯಾ ಮತ್ತು ಸಂಗಡಿಗರು ಹಾಡಿದರು. ವಂದನೆಗಳನ್ನು ಫ್ರೊ.ಎಲ್.ಎನ್.ಚೇತನಾ ಅರ್ಪಿಸಿದರು. ಎಂಬಿಎ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಮುಂತಾದವರು ಉಪಸ್ಥಿತರಿದ್ದರು.

ವರದಿ ಹಾಗೂ ಚಿತ್ರ : ಎಚ್.ಬಿ.ಮಂಜುನಾಥ.ದಾವಣಗೆರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...