ರಾಜ್ಯ ಶಿಕ್ಷಣ ಇಲಾಖೆಯು ಪಠ್ಯಪರಿಷ್ಕರಣೆ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದೆ. ಈ ಹಿಂದಿನ 3 ಸಮಿತಿಗಳ ಶಿಫಾರಸು ಆಧರಿಸಿ ಪರಿಷ್ಕರಣೆಯಾಗಿದ್ದ ಪಠ್ಯಗಳನ್ನು ktbs.kar.nic.in ನಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳು ಇದ್ದರೆ ಶಿಕ್ಷಣ ಇಲಾಖೆಗೆ ಸಲ್ಲಿಸಬಹುದು.
ಪ್ರಸಕ್ತ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ, ಹಿಂದಿನ ಡಾ.ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ಅದಕ್ಕೂ ಹಿಂದಿನ ಡಾ.ಮುಡಂಬಡಿತ್ತಾಯ ನೇತೃತ್ವದ ಸಮಿತಿಗಳು ಪರಿಷ್ಕರತ ಪಠ್ಯಪುಸ್ತಕಗಳನ್ನು ಸಾರ್ವಜನಿಕ ವೇದಿಕೆಗೆ ತೆರೆದಿಟ್ಟಿದೆ. ರಾಜ್ಯ ಪಠ್ಯ ಪುಸ್ತಕ ಸಂಘದ ವೆಬ್ ಸೈಟ್ https://karbs.kar.nic.in ನಲ್ಲಿ 3 ಸಮಿತಿಗಳು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಪ್ರಕಟಿಸಲಾಗಿದೆ.
3 ಸಮಿತಿಗಳ ಪರಿಷ್ಕೃತ ಪಠ್ಯಗಳನ್ನು ಪ್ರಕಟಿಸಿ ಯಾವುದೇ ಆಕ್ಷೇಪಾರ್ಯ ಅಂಶಗಳಿದ್ದರೂ ಅವುಗಳ ಬಗ್ಗೆ ಶಿಕ್ಷಣ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.