ಶಿವಮೊಗ್ಗದ ಕರ್ನಾಟಕ ಸಂಘ ಭವನದಲ್ಲಿ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಡಾ.ಎನ್.ಎಸ್ ಲೀಲಾ ಅವರಿಗೆ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ, ವಿಜಯನಗರ ಸಾಮ್ರಾಜ್ಯ, ಹಂಪಿಯನ್ನು ಹಾಳು ಮಾಡಿದವರು ಮುಸ್ಲಿಮರು ಎಂಬ ತಪ್ಪು ಕಲ್ಪನೆ ಎಲ್ಲೆಡೆ ಬಿತ್ತರವಾಗಿದೆ. ಆದರೆ, ಹಿಂದೂಗಳ ನಡುವಿನ ಪರಸ್ಪರ ಧ್ವೇಷದಿಂದ ಹಂಪಿ, ಹಾಳು ಬೀಳಲು ಕಾರಣ ಎಂದು ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿದರು.
“ಆಡು ಮುಟ್ಟದ ಸೊಪ್ಪಿಲ್ಲ,ಕಾರಂತರು ಮೆಟ್ಟದ ಜ್ಞಾನ ಕ್ಷೇತ್ರಗಳಿಲ್ಲ”. ಸ್ಥಾನ,ಮಾನ,ಧನದಾಹದ ಈ ಕಾಲದಲ್ಲಿ ಶಿವರಾಮ ಕಾರಂತರ ರ ತಿಳುವಳಿಕೆಗೂ, ನಮ್ಮ ತಿಳುವಳಿಕೆಗೂ ಅಜಗಜಾಂತರವಿದೆ. ಶಿವರಾಮ ಕಾರಂತರು ಮತ್ತು ಶಂಭಾ ಜೋಶಿ ಅವರ ಜೋಡಿ, ದೇಶ ವಿದೇಶಗಳನ್ನು ಸುತ್ತಿ,ಅನೇಕ ಕೋಶಗಳನ್ನು ಓದಿ ಸಂಗ್ರಹಿಸಿಕೊಂಡು. ಆ ಸಾರವನ್ನು ತಮ್ಮ ಲೇಖನದ ಮೂಲಕ ಉಣಬಡಿಸಿದ ಸಾಧನೆ ಕಾರಂತರದ್ದು ಎಂದು ಡಾ. ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿದ ವಿಜ್ಞಾನ ಬರಹಗಾರ್ತಿ,ನಿವೃತ್ತ ಪ್ರಾಧ್ಯಾಪಕಿ ಡಾ.ಎನ್ ಎಸ್ ಲೀಲಾ ಅವರು ತಿಳಿಸಿದರು.