Tuesday, August 25, 2026
Tuesday, August 25, 2026

ಭಾರತ ತಂಡದ ದಾಖಲೆ ಮೊತ್ತ: ಹಾಗೆಯೇ ರನ್ ಚಚ್ಚಿ ಗೆದ್ದ ದ.ಆಫ್ರಿಕಾ

Date:

ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಭರ್ಜರಿ ಜಯ ಗಳಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 7 ವಿಕೆಟ್ ಗೆಲುವು.

ಶ್ರೇಷ್ಠ ಬ್ಯಾಟಿಂಗ್ ಹೊರತಾಗಿಯೂ ನಿರಾಶದಾಯಕ ಬೌಲಿಂಗ್ ಹಾಗೂ ಕಳಪೆ ಫೀಲ್ಡಿಂಗ್ ನಿಂದಾಗಿ ರಿಷಬ್ ಪಂತ್ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಹೇಳು ವಿಕೆಟ್ ಗಳ ಅಂತರದಿಂದ ಸೋಲು ಕಂಡಿತು. ಇದರೊಂದಿಗೆ ಐದು ಪದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದ ಸೌತ್ ಆಫ್ರಿಕಾ ತಂಡ ಜೂನ್ 12 ರಂದು ಕಟಕ್ ನ ಬರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಆತ್ಮವಿಶ್ವಾಸ ಗಳಿಸಿಕೊಂಡಿತು.
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಆಹ್ವಾನ ಪಡೆಯಿತು.
ಟೀಮ್ ಇಂಡಿಯಾ 20 ಓವರ್ ಗಳಲ್ಲಿ 4 ವಿಕೆಟ್ ಗೆ 211 ರನ್ ಗಳ ಬೃಹತ್ ಮೊತ್ತ ಗಳಿಸಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಇಂಡಿಯಾ ದಾಖಲಿಸಿದ ಗರಿಷ್ಠ ಮೊತ್ತ. ರೀತಿಯಾಗಿ ಪ್ರತಿಯಾಗಿ, ದಕ್ಷಿಣ ಆಫ್ರಿಕಾ ತಂಡ 19.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಇದರೊಂದಿಗೆ ಗರಿಷ್ಠ ಮೊತ್ತ ಬೆನ್ನಟ್ಟಿದ ಹಿರಿಮೆಗೂ ಭಾಜನವಾಗಿತ್ತು. ಇದೇ ವೇಳೆ, ಸತತ 13 ಪಂದ್ಯ ಗೆದ್ದು ವಿಶ್ವದಾಖಲೆಗೇಯುವ ಭಾರತದ ಕನಸು ಭಗ್ನಗೊಂಡಿತು.

ಗುರಿಯ ಹಾದಿಯಲ್ಲಿ 81 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಹರಿಣ ಪಡೆ, ರಿಸ್ಸಿ ವಾನ್ ಡರ್ ಡೆಸನ್ (75) ಮತ್ತು ಡೇವಿಡ್ ಮಿಲ್ಲರ್ (64) ಅವರ ಸಿಡಿಲಬ್ಬರದ ಆಟದಿಂದ ಚೇತರಿಸಿಕೊಂಡಿತು. ಅತಿಥೇಯ ಬೋಲಿಂಗ್ ಬಳಗವನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮುರಿಯದೆ ನಾಲ್ಕನೇ ವಿಕೆಟ್ಗೆ ಕೇವಲ 64 ಎಸೆತದಲ್ಲಿ 131ರನ್ ಸಿಡಿಸಿ ಐದು ಎಸೆತಗಳು ಬಾಕಿ ಇರುವಂತೆಯೇ ತಮ್ಮ ತಂಡಕ್ಕೆ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಿಶನ್ ಕಿಶನ್ ಮತ್ತು ಋತುರಾಜ ಗಾಯಕ್ವಾಡ್ ಜೋಡಿ ಇಂದ ಉತ್ತಮ ಆರಂಭ ದೊರೆಯಿತು. ಎಡಗೈ ಬಲಗೈ ಜೋಡಿ ಆಟಕ್ಕೆ ಪ್ರವಾಸಿ ತಂಡದ ಬೌಲರ್ ಗಳು ಬೆಚ್ಚಿಬಿದ್ದರು. ಅದರಲ್ಲೂ ವಿಶೇಷವಾಗಿ ಎಡಗೈ ದಾಂಡಿಗ ಇಶನ್ ಕಿಶನ್ ಕಡಿವಾಣ ಹಾಕಲು ಹರಿಣ ಪಡೆಗೆ ಸಾಧ್ಯವಾಗಲಿಲ್ಲ. ಋತುರಾಜ (23) ಜೊತೆ ಮೊದಲ ವಿಕೆಟ್ ಗೆ 57 ರನ್ ಕಲೆಹಾಕಿದ ಇಶನ್ ಕಿಶನ್, ಆಬಳಿಕ ಶ್ರೇಯಸ್ ಅಯ್ಯರ್ (36) ಸಂಗಡ ಎರಡನೇ ವಿಕೆಟ್ ಗೆ 80ರ ಕೂಡಿಹಾಕಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...