Sunday, May 3, 2026
Sunday, May 3, 2026

ಮಲೆನಾಡಿನಾದ್ಯಂತ ಸೀಗೆಹುಣ್ಣಿಮೆ ಸಂಭ್ರಮ

Date:

ತಾಳಗುಪ್ಪ: ಇಂದು ಭೂ‌ಮಾತೆಯ ಸೀಮಂತ ಹಬ್ಬವಾದ ಭೂಮಿ ಹುಣ್ಣಿಮೆ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಹೋಬಳಿಯ ಎಲ್ಲೆಡೆ ರೈತರು ತಮ್ಮ ಜಮೀನಿನಲ್ಲಿ ಫಸಲು ಮೈ ತುಂಬಿದ ಈ ದಿನವನ್ನು ಪೂಜಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. ಹುಣ್ಣಿಮೆಯ ಈ ದಿನ ಮಲೆನಾಡಿನ ರೈತರು ನಸುಕಿನಲ್ಲಿ ಎದ್ದು ವಿವಿಧ ಎಲೆಗಳ ಸೊಪ್ಪನ್ನು ಬೇಯಿಸಿ ಅದನ್ನು ತಮ್ಮ ಜಮೀನಿನಲ್ಲಿ ಎಲ್ಲೆಡೆ ಹಾಕುತ್ತಾರೆ. ಇದಕ್ಕೆ ಅಚ್ಚು ಬೀರುವುದು ಎನ್ನುತ್ತಾರೆ. ನಂತರ ಜಮೀನಿನಲ್ಲಿ ದೇವರ ಪ್ರತಿಷ್ಠಾಪಿಸಿ ಪೂಜೆ ಮಾಡಿ ಕಡುಬು ನೈವೇದ್ಯ ಮಾಡಿ ಅಲ್ಲಿಯೇ ಊಟ ಮಾಡುವ ಪದ್ದತಿ ಆಚರಿಸುತ್ತಾರೆ. ಕೃಷಿಕ ಹೀರೆಮನೆ ಬಾಲಚಂದ್ರರವರ ತೋಟದಲ್ಲಿ ಭೂ ಹುಣ್ಣಿಮೆಯನ್ನು ಆಚರಿಸಲಾಯಿತು. ನಮಗೆ ಅನ್ನ ನೀಡುತ್ತಿರುವ ಭೂಮಿತಾಯಿಗೆ ಕೃತಜ಼ತೆ ಸಲ್ಲಿಸುವ ಪರಿ ಇದಾಗಿದೆ. ವರದಿ ಕೃಪೆ: ಶ್ರೀ. ರಾಘವೇಂದ್ರ ಶರ್ಮಾ ತಲವಾಟ. ನಿರೂಪಣಾ ಧ್ವನಿ: ರಚನಾ.ಕೆ.ಆರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...