Tuesday, March 24, 2026
Tuesday, March 24, 2026

ಬಿಎಸ್ ಡಬ್ಲ್ಯೂ ಪರೀಕ್ಷೆಯಲ್ಲಿ ಕು.ಭೂಮಿಕಾ 5 ನೇಶ್ರೇಣಿ ತೇರ್ಗಡೆ

Date:

2012 ರಲ್ಲಿ ಪ್ರಾರಂಭವಾದ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಇದೀಗ ಮತ್ತೆ ಪುನಃ ರ‍್ಯಾಂಕ್‌ನ ಸಂಭ್ರಮ. ಕಾಲೇಜಿನ ಬಿಎಸ್‌ಡಬ್ಲೂ ವಿದ್ಯಾರ್ಥಿನಿ ಕು. ಭೂಮಿಕ ಕುವೆಂಪು ವಿಶ್ವವಿದ್ಯಾಲಯವು ಸೆಪ್ಟೆಂಬರ್/ಅಕ್ಟೋಬರ್ 2021 ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಡಾ. ಅಶೋಕ್ ಪೈ ರವರ ಸ್ಮರಣಾರ್ಥ ಮಾನಸ ಟ್ರಸ್ಟ್ ನಿಂದ ಕುವೆಂಪು ವಿಶ್ವವಿದ್ಯಾಲಯ ಸಂಯೋಜನೆಯೊಂದಿಗೆ ಪ್ರಾರಂಭಿಸಲ್ಪಟ್ಟ ಈ ಕಾಲೇಜು ತನ್ನ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಹಪಠ್ಯ ಚಟುವಟಿಕೆಗಳ ಸಾಧನೆಗಳಿಂದ ಈಗಾಗಲೇ ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ತನ್ನ ಎರಡನೇ ಬ್ಯಾಚ್‌ನಲ್ಲೂ ರ‍್ಯಾಂಕ್ ಗಳಿಸಿರುವುದರಿಂದ ಕಾಲೇಜು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಕು. ಭೂಮಿಕರವರಿಗೆ ಅಭಿನಂದಿಸಿದ ಡಾ. ರಜನಿ ಪೈರವರು ಡಾ. ಅಶೋಕ್ ಪೈರವರು ಶಿಕ್ಷಣದ ಕುರಿತು ಹೊಂದಿದ್ದ ಕನಸು ನನಸಾಗುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.

ಮಾನಸ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ಶಾನ್‌ಭಾಗ್, ಡಾ. ವಾಮನ್ ಶಾನ್‌ಭಾಗ್ ಹಾಗೂ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಯವರು ವಿದ್ಯಾರ್ಥಿನಿಗೆ ಅಭಿನಂದಿಸುತ್ತಾ ಕಾಲೇಜಿನ ಪ್ರಗತಿಗೆ ಸಹಕರಿಸುತ್ತಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಶಿವಮೊಗ್ಗದ ಹಲವಾರು ಸಹೃದಯರಿಗೆ ಕೃತಜ್ಞತೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಯವರು, ಕು. ಭೂಮಿಕರವರಿಗೆ ಅಭಿನಂದನೆಯನ್ನು ತಿಳಿಸುತ್ತಾ ದೂರದ ಜೋಗ್‌ಫಾಲ್ಸ್ ನಿಂದ ಬಂದ ವಿದ್ಯಾರ್ಥಿನಿ ಒಳ್ಳೆಯ ಪರಿಶ್ರಮದಿಂದ ಓದಿ ರ‍್ಯಾಂಕ್ ಪಡೆದಿರುತ್ತಾರೆ. ಮಾತ್ರವಲ್ಲ, ಕಾಲೇಜಿನ ಪ್ರಾಧ್ಯಾಪಕ ವೃಂದದ ಸೂಕ್ತ ಮಾರ್ಗದರ್ಶನ, ಸಿಬ್ಬಂದಿ ಮಿತ್ರರ ಪ್ರೋತ್ಸಾಹ ಹಾಗೂ ಸುವ್ಯವಸ್ಥಿತವಾದ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಮಾನಸ ಟ್ರಸ್ಟ್ ಕೂಡಾ ಈ ಸಾಧನೆಗೆ ಕಾರಣ ಎಂದರು.

ಕು. ಭೂಮಿಕರವರು ಜೋಗಫಾಲ್ಸ್ ನ ಶ್ರೀಮತಿ ಲಕ್ಷ್ಮಿ ಹಾಗೂ ಶ್ರೀ ರಾಜು ರವರ ಸುಪುತ್ರಿ. ಇದೀಗ ಮಂಗಳೂರಿನ ಎಂ. ವಿ. ಶೆಟ್ಟಿ ಕಾಲೇಜಿನಲ್ಲಿ ಬಿಎಸ್ ಡಬ್ಯ್ಲೂ ಓದುತ್ತಿದ್ದಾರೆ.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಬಿಎ ಮನಃಶಾಸ್ತ್ರ ಪತ್ರಿಕೋದ್ಯಮ, ಇತಿಹಾಸ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ, ಬಿಎಸ್‌ಡಬ್ಲ್ಯೂ, ಬಿ.ಎಸ್ಸಿ, ಬಿ.ಕಾಂ ಹಾಗೂ ಎಂಎಸ್ಸಿ ಮನಃಶಾಸ್ತ್ರ ಕೋರ್ಸ್ ಗಳನ್ನು ನಡೆಸುತ್ತಿದೆ.

ಕಾಲೇಜಿನ ಎಲ್ಲ ಸಿಬ್ಬಂದಿ ಮಿತ್ರರೂ, ಸಲಹಾ ಸದಸ್ಯರು ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.

ರ‍್ಯಾಂಕ್ ಬರಬೇಕು ಎಂಬುದು ನನ್ನ ಕನಸಾಗಿರದೆ ನನ್ನ ಛಲವಾಗಿತ್ತು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಇವತ್ತು ನನ್ನ ಸಾಧನೆಯ ದಾರಿಗೆ ಬೆಂಬಲವಾಗಿ ನಿಂತಿದೆ. ಅಲ್ಲಿ ಕಲಿತಂತಹ ಎಷ್ಟೋ ಹೊಸ ವಿಷಯಗಳು, ಮೈಗೂಡಿಸಿಕೊಂಡ ಕಲೆಗಳು ನನ್ನನ್ನು ಬದಲಾಯಿಸಿದೆ. ಅಲ್ಲಿನ ವಾತಾವರಣ, ಸಾಧನೆಯ ಮೆಟ್ಟಿಲನ್ನು ಹತ್ತಲು ಸಿಕ್ಕಂತಹ ಅವಕಾಶಗಳು, ಬೆನ್ನುಲುಬಾಗಿ ನಿಂತ ನಮ್ಮ ಗುರುಗಳು ನಮ್ಮಂತಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿದ್ದಾರೆ. ನಮ್ಮ ಹೆಜ್ಜೆಯ ಜೊತೆ ಅವರ ಸಹಕಾರವನ್ನಿಟ್ಟದ್ದು ಇಂದು ನಾನು ರ‍್ಯಾಂಕ್ ಎನ್ನುವ ಮೈಲಿಗಲ್ಲು ಹತ್ತಲು ಸಹಾಯವಾಗಿದೆ. ಇದೀಗ
ಬಿಎಸ್ ಡಬ್ಯ್ಲೂ ಮಾಡುತ್ತಿರುವ ನನಗೆ ಉತ್ತಮ ಆಪ್ತಸಮಾಲೋಚಕಿಯಾಗುವ ಆಸೆ ಇದೆ. ನನಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಸದಾ ನಾನು ಚಿರ ಋಣಿಯಾಗಿರುವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...