Thursday, March 26, 2026
Thursday, March 26, 2026

ಲೇಖಕಿ ಗೀತಾಂಜಲಿಶ್ರೀ ಅವರ ಕೃತಿಗೆ ಬೂಕರ್ ಪ್ರಶಸ್ತಿ

Date:

ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಕಾದಂಬರಿಗೆ ಟೋಂಬ್ ಆಫ್ ಸ್ಯಾಂಡ್ ಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಇದೇ ಪ್ರಥಮ ಬಾರಿಗೆ ಯಾವುದೇ ಭಾರತೀಯ ಭಾಷೆಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುಸ್ತಕ ಎಂಬ ಗೌರವಕ್ಕೆ ಪಾತ್ರವಾಗಿದೆ.

ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ, ದೆಹಲಿ ಮೂಲದ ಲೇಖಕಿ ಗೀತಾಂಜಲಿ ಶ್ರೀ ಅವರು ಇವರ ಪುಸ್ತಕದ ಇಂಗ್ಲಿಷ್ ಅನುವಾದಕಿ ಡೈಸಿ ರಾಕ್‌ವೆಲ್ ಅವರೊಂದಿಗೆ 50,000 ಮೌಲ್ಯದ ಬಹುಮಾನವನ್ನು ಸ್ವೀಕರಿಸಿದ್ದಾರೆ. ಇಷ್ಟಲ್ಲದೇ ಪ್ರಶಸ್ತಿಯಿಂದ ತಮ್ಮ ಹೃದಯ ತುಂಬಿ ಬಂದಿರುವುದಾಗಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟೋಂಬ್ ಆಫ್ ಸ್ಯಾಂಡ್ ಕಾದಂಬರಿಯೂ ಮೂಲತಃ ಹಿಂದಿಯಲ್ಲಿ ರೆಟ್ ಸಮಾಧಿ ಎಂದು ಇದೆ. ಉತ್ತರ ಭಾರತ ಮೂಲದ 80 ವರ್ಷದ ಮಹಿಳೆಯನ್ನು ಆಧರಿಸಿದ ಕತೆ ಇದಾಗಿದೆ.

ಬೂಕರ್ ತೀರ್ಪುಗಾರರು ಈ ಕಾದಂಬರಿಯನ್ನು ಸಂತೋಷದ ಕಾಕೋಫೋನಿ ಹಾಗೂ ಆಕರ್ಷಣೀಯ ಕಾದಂಬರಿ ಎಂದು ಕರೆದಿದ್ದಾರೆ.

ಈ ಕಾದಂಬರಿಯಲ್ಲಿ 80ರ ಪ್ರಾಯದ ವೃದ್ದೆ ತನ್ನ ಗಂಡನನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವ ಕತೆಯಾಗಿದೆ.

ನಾನು ಬೂಕರ್‌ನ ಬಗ್ಗೆ ಕನಸು ಕಂಡಿರಲಿಲ್ಲ. ನಾನು ಅದನ್ನು ಮಾಡಬಹುದೆಂದು ನಾನು ಎಂದಿಗೂ ಯೋಚಿಸಲಿಲ್ಲ. ಎಂತಹ ದೊಡ್ಡ ಗುರುತಿಸುವಿಕೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ. ಸಂತೋಷಪಡುತ್ತೇನೆ, ಈ ಗೌರವಕ್ಕೆ ವಿನಮ್ರಳಾಗಿದ್ದೇನೆ ಎಂದು ಲೇಖಕಿ ಗೀತಾಂಜಲಿ ಶ್ರೀ ಪ್ರಶಸ್ತಿ ಸ್ವೀಕರಿಸಿ ತಮ್ಮ ಸಂತೋಷದ ಮಾತುಗಳನ್ನು ಆಡಿದ್ದಾರೆ.

ರೆಟ್ ಸಮಾಧಿ ಅಥವಾ ಮರಳಿನ ಸಮಾಧಿ ಕಾದಂಬರಿಯಲ್ಲಿ ನಾವು ವಾಸಿಸುವ ಜಗತ್ತಿಗೆ ಒಂದು ಸೊಗಸು. ಸನ್ನಿಹಿತವಾದ ವಿನಾಶದ ಮಧ್ಯೆಯೂ ಭರವಸೆಯನ್ನು ಉಳಿಸಿಕೊಳ್ಳುವ ಶಾಶ್ವತ ಶಕ್ತಿ ಇದೆ. ಬೂಕರ್ ಪ್ರಶಸ್ತಿಯಿಂದಾಗಿ ಈ ಕಾದಂಬರಿ ಮತ್ತಷ್ಟು ಜನರನ್ನು ತಲುಪಲಿದೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Water Tax ಶಿವಮೊಗ್ಗದ ವಿವಿಧೆಡೆ ನೀರಿನ ಕಂದಾಯ ಪಾವತಿ ಕೌಂಟರ್ ವ್ಯವಸ್ಥೆ.

Water Tax ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ...

Adichunchanagiri Mutt ಏಪ್ರಿಲ್1. ಸರಳ ಸಾಮೂಹಿಕ ವಿವಾಹ & ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ

Adichunchanagiri Mutt ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ...