Thursday, July 9, 2026
Thursday, July 9, 2026

ಎಂಟು ವರ್ಷಗಳ ಆಡಳಿತ:ಮೋದಿ ಅವರ ಟೀಂ ಇಂಡಿಯಾ ಹೆಜ್ಜೆಗುರುತುಗಳು

Date:

ಕಳೆದ 8 ವರ್ಷಗಳಲ್ಲಿ ಎಂದೂ ಕಾಣದ ಪರಿವರ್ತನೆ ಭಾರತದಲ್ಲಿ ಗೋಚರಿಸುತ್ತಿದೆ.
ಈ ಕಾರಣದಿಂದಾದ ಆರ್ಥಿಕ ಬೆಳವಣಿಗೆಯ ಫಲವನ್ನು ಕೂಡ ಜನರು ಪಡೆಯುತ್ತಿದ್ದಾರೆ. ಈ ಪರಿವರ್ತನೆಯ ಸ್ವರೂಪ ಎಷ್ಟು ವೇಗವಾಗಿದೆ ಎಂದರೆ, 2014 ರಿಂದೀಚೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರದ ಅವಧಿಯಲ್ಲಿನ ಆರ್ಥಿಕ ಬೆಳವಣಿಗೆಗಳ ವಿವರ ದಾಖಲಿಸುವುದು ಅಷ್ಟು ಸುಲಭವಲ್ಲ.

ದೇಶದ ಗ್ರಾಮೀಣ ಭಾಗದ ಜನತೆ ಬ್ಯಾಂಕ್ ವ್ಯವಹಾರ ಜಾಲದಲ್ಲಿ ದಾಖಲಾಗಿ, ಸರ್ಕಾರದ ನೇರ ಹಣ ವರ್ಗಾವಣೆಗಳಂತಹ ಪರಿಣಾಮಕಾರಿ ಫಲಾನುಭವಕ್ಕೆ ಸಾಕ್ಷಿಯಾದರು.

ದೇಶದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಕುಟುಂಬದ ಅಡುಗೆ ಕಾರ್ಯಕ್ಕೆ ಕಾಡುಕಟ್ಟಿಗೆ, ಪಶುಗಳ ಸಗಣಿ ಕುಳ್ಳುಗಳೇ ಪರಂಪರಾಗತ ಅನಿವಾರ್ಯ ಇಂಧನ ಸಾಧನಗಳಾಗಿದ್ದವು. ಇದು ಮಹಿಳೆಯರ ಆರೋಗ್ಯಕ್ಕೆ ಮಾರಕವಾಗಿತ್ತು. ದೇಶದ ಗೃಹಿಣಿಯರ, ವಿಶೇಷವಾಗಿ ಗ್ರಾಮೀಣ ಬಡ ಹೆಣ್ಣುಮಕ್ಕಳ ಕಾಳಜಿಯೇ ಪ್ರಧಾನಿ ಉಜ್ವಲ ಯೋಜನೆಯ ಕಲ್ಪನೆಯಾಗಿ ಮೂಡಿಬಂತು. ಇದುವರೆಗೆ ದೇಶದಲ್ಲಿ 8 ಕೋಟಿ ಹೊಸ ಅಡುಗೆ ಅನಿಲದ ಸಂಪರ್ಕ ಕಲ್ಪಿಸಲಾಗಿದೆ.

ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಯೋಜನೆಯ ಅನುಷ್ಠಾನದಿಂದ ದೇಶದ ಆರೋಗ್ಯ ಕ್ಷೇತ್ರ ವ್ಯಾಪಕವಾಗಿ ಜನತೆಯ ಮನೆ ಬಾಗಿಲಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯಗಳ ಜಂಟಿ ಅನುದಾನಗಳ ಆಧಾರಿತ ಈ ಯೋಜನೆ ದೇಶದ 10 ಕೋಟಿ ಬಡ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಗುರಿ ಇಟ್ಟುಕೊಂಡಿದೆ.

ನರೇಂದ್ರ ಮೋದಿ ನೇತೃತ್ವದ ಟೀಂ ಇಂಡಿಯಾಕ್ಕೆ ದೊರಕಿದ ಇಂತಹ ಗೆಲುವು ಅಭೂತಪೂರ್ವ! ಇದು ಮೋದಿ ನಾಯಕತ್ವದ ಮೂಲಧ್ಯೇಯಗಳಾದ ಸೇವೆ, ಸುಗಮ ಆಡಳಿತ ಹಾಗೂ ಬಡವರ ಕಲ್ಯಾಣದ ಸ್ಪಷ್ಟ ಪ್ರತಿಫಲನವಾಗಿದೆ.

ಈ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಪರಿಚಯಿಸಿದ ಪ್ರಧಾನಮಂತ್ರಿ ಜನಧನ್ ಯೋಜನೆ ಪರಿಣಾಮವಾಗಿ ಬ್ಯಾಂಕಿಂಗ್ ಕ್ಷೇತ್ರವು ದೇಶದ 45 ಕೋಟಿ ಜನರಿಗೆ (ಮೇ, 22-2022ರವರೆಗೆ )ತೆರೆದುಕೊಂಡಿದೆ. ಅಲ್ಲದೆ, 1,67,145 ಕೋಟಿ ರೂ. ಠೇವಣಿ ಬ್ಯಾಂಕುಗಳಲ್ಲಿ ಲಭ್ಯವಿದೆ.

ಇದರಿಂದಾಗಿ, 2016ರಲ್ಲಿದ್ದ ಅಡುಗೆ ಅನಿಲ ಬಳಕೆಯು ಶೇ. 62ರಿಂದ ಶೇ. 99.8ಕ್ಕೆ ಏರಿದೆ. 2022-23 ರ ಆಯವ್ಯಯದಲ್ಲಿ ಇನ್ನೂ 1 ಕೋಟಿ ಹೊಸ ಅಡುಗೆ ಅನಿಲದ ಸಂಪರ್ಕದ ಘೊಷಣೆ ಮಾಡಲಾಗಿದೆ. ಒಟ್ಟಾರೆ ಅಡುಗೆ ಮನೆಗಳನ್ನು ಹೊಗೆಮುಕ್ತವಾಗಿಸಿ ಗ್ರಾಮೀಣ ಮಹಿಳೆಯರನ್ನು ವಿಷಕಾರಿ ಹೊಗೆಯಿಂದ ಮುಕ್ತಗೊಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...