ರಾಜ್ಯ ಸರ್ಕಾರಿ ನೌಕರರ 40 ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ನೆರವೇರಿಸಿದೆ. ಮೇ.30ರಂದು ಕೆಜಿಐಡಿ ಆನ್ ಲೈನ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಈ ಮೂಲಕ ನೌಕರರಿಗೆ ಪ್ರತಿ ತಿಂಗಳ ವೇತನ-ಭತ್ಯೆಗಳ ಮಾಹಿತಿಯು ಎಸ್ಎಂಎಸ್ ಮೂಲಕ ಮೊಬೈಲ್ ಗೆ ಲಭ್ಯವಾಗುವಂತೆ ಆಗಲಿದೆ.
ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇ 30 ಸೋಮವಾರದಂದು ಕೆಜಿಐಡಿ ಆನ್ ಲೈನ್ ಸೇವೆಯನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದೆ.
ಇನ್ನೂ ಕೆಜಿಐಡಿ ಆನ್ ಲೈನ್ ಸೇವೆ ಲೋಕಾರ್ಪಣೆಗೊಂಡರೇ, ರಾಜ್ಯ ಸರ್ಕಾರಿ ನೌಕರರ ಪ್ರತಿ ತಿಂಗಳ ವೇತನ ಭತ್ಯೆಗಳ ಮಾಹಿತಿಯು ಎಸ್ ಎಂ ಎಸ್ ಮೂಲಕ ನೌಕರರ ಮೊಬೈಲ್ ಗೆ ಬರಲಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಂತೋಷದ ವಿಚಾರವನ್ನು ಸರ್ಕಾರ ನೀಡಿದೆ.