Wednesday, July 8, 2026
Wednesday, July 8, 2026

ಉಕ್ರೇನ್ ಗೆ 20 ದೇಶಗಳಿಂದ ಶಸ್ತ್ರಾಸ್ತ್ರಗಳ ನೆರವು

Date:

ಮಿತ್ರರಾಷ್ಟ್ರಗಳ ಸಭೆಯಲ್ಲಿ, ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನ್ ಗೆ ಕ್ಷಿಪಣಿ, ಹೆಲಿಕಾಪ್ಟರ್ ಸಹಿತ ಶಸ್ತ್ರಾಸ್ತ್ರಗಳನ್ನು ಒದಗಿಸಲು 20 ದೇಶಗಳು ಮುಂದೆ ಬಂದಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಘೋಷಿಸಿದ್ದಾರೆ.

20 ದೇಶಗಳು ಶಸ್ತ್ರಾಸ್ತ್ರ, ಸೇನಾ ಉಪಕರಣ, ಟ್ಯಾಂಕ್ ಗಳು, ಹೆಲಿಕಾಪ್ಟರ್ ಗಳು, ತಟ ರಕ್ಷಣಾ ವ್ಯವಸ್ಥೆ ಸಹಿತ ಶಸ್ತ್ರಾಸ್ತ್ರ ನೆರವಿನ ವಾಗ್ದಾನ ಮಾಡಿವೆ. ಇತರರು ಉಕ್ರೇನ್ ಯೋಧರಿಗೆ ತರಬೇತಿ ಒದಗಿಸುವುದಾಗಿ ಘೋಷಿಸಿದ್ದಾರೆ. 3 ತಿಂಗಳಿಂದ ನಡೆಯುತ್ತಿರುವ ಯುದ್ಧದ ಇತ್ತೀಚಿನ ಸ್ಥಿತಿಗತಿಯ ಬಗ್ಗೆ ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿಯ್ ರೆಝ್ನಿಕೋವ್ ಸಭೆಗೆ ವಿವರಿಸಿದರು ಎಂದು ಆಸ್ಟಿನ್ ಹೇಳಿದ್ದಾರೆ.

ಉಕ್ರೇನ್ ರಕ್ಷಣಾ ಸಂಪರ್ಕ ಗುಂಪು ಎಂದು ಹೆಸರಿಸಲಾಗಿರುವ ಸಂಘಟನೆಯ ಸದಸ್ಯ ದೇಶಗಳ ಪ್ರತಿನಿಧಿಗಳು ಆನ್ ಲೈನ್ ಮೂಲಕ ನಡೆದ ಸಭೆಯಲ್ಲಿ ಪಾಲ್ಗೊಂಡು ಉಕ್ರೇನ್ ಗೆ ನೆರವು ಒದಗಿಸುವ ಬಗ್ಗೆ ಚರ್ಚೆ ನಡೆಸಿವೆ.

ಹಡಗು ನಿರೋಧಕ ಹಾರ್ಪೂನ್ ಕ್ಷಿಪಣಿ ವ್ಯವಸ್ಥೆ ಒದಗಿಸುವುದಾಗಿ ಡೆನ್ಮಾರ್ಕ್ ವಾಗ್ದಾನ ಮಾಡಿದೆ. ದಾಳಿ ಹೆಲಿಕಾಪ್ಟರ್, ಟ್ಯಾಂಕ್ ಗಳು ಹಾಗೂ ರಾಕೆಟ್ ವ್ಯವಸ್ಥೆಗಳನ್ನು ಝೆಕ್ ಗಣರಾಜ್ಯ ಒದಗಿಸಲಿದೆ. ಹಾರ್ಪೂನ್ ಕ್ಷಿಪಣಿ ದಡದಿಂದ 300 ಕಿ.ಮೀ ದೂರದಲ್ಲಿರುವ ಹಡಗುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. ಇವುಗಳನ್ನು ಕಪ್ಪು ಸಮುದ್ರದಲ್ಲಿರುವ ಉಕ್ರೇನ್ ನ ಒಡೆಸಾ ಬಂದರಿನಲ್ಲಿ ನಿಯೋಜಿಸಲಾಗುವುದು. ಈ ಕ್ಷಿಪಣಿಗಳು ರಷ್ಯಾದ ಕೆಲವು ನೌಕೆಗಳು ಲಂಗರು ಹಾಕಿರುವ ಸೆವಾಸ್ಟೊಪೊಲ್ ಬಂದರಿನ ಉದ್ದೇಶಿತ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ದೀರ್ಘದೂರ ವ್ಯಾಪ್ತಿಯ ಕ್ಷಿಪಣಿ, ಎಂ270 ಮತ್ತು ಎಂ 142 ಹಿಮರ್ ಕ್ಷಿಪಣಿ ಉಡಾವಣಾ ವ್ಯವಸ್ಥೆಯನ್ನು ತ್ವರಿತವಾಗಿ ಒದಗಿಸುವಂತೆ ಉಕ್ರೇನ್ ಅಮೆರಿಕವನ್ನು ಒತ್ತಾಯಿಸಿದೆ. ಈ ವ್ಯವಸ್ಥೆಯಿಂದ 187 ಮೈಲುಗಳಷ್ಟು ದೂರದ ಗುರಿಯನ್ನು ತಲುಪುವ ಸಾಮರ್ಥ್ಯದ ಹಲವು ಕ್ಷಿಪಣಿಗಳನ್ನು ಏಕಕಾಲದಲ್ಲಿ ಉಡಾಯಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...