ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಭಾರಿ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಅದೇ ರೀತಿ ಈರುಳ್ಳಿ ಬೆಳೆದ ರೈತರಿಗೆ ತಾವು ಬೆಳೆದ ಈರುಳ್ಳಿ ಯ ಬೆಲೆ ಇಳಿಕೆ ಕಂಡಿದೆ.
ಇದರಿಂದ ರೈತರು ಕಂಗಾಲಾಗಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಸುಮಾರು 60 ಸಾವಿರದಷ್ಟು ರೂಪಾಯಿ ಖರ್ಚು ಮಾಡಿ ಬೆಳೆದ ಈರುಳ್ಳಿಗೆ ಕೆ.ಜಿ.ಗೆ 2 ರೂ.ರಷ್ಟು ಬೆಲೆಯೂ ದೊರೆಯದ ಸ್ಥಿತಿ ರೈತರಿಗೆ ಎದುರಾಗಿರಾಗಿದೆ. ಇದರಿಂದ ರೈತರು ಚಿಂತೆಗೀದಡಾಗಿದ್ದರೆ.
ಸಾಲ ಮಾಡಿ ಬೆಳೆಯನ್ನು ಬೆಳೆದರು,ಅದಕ್ಕೆ ಸರಿಯಾದ ಬೆಲೆ ಸಿಗದ ಪರಿಸ್ಥಿತಿ ರೈತರಿಗೆ ಎದುರಾಗಿದೆ.
ಬೇಸಿಗೆಯ ಕಾಲದಲ್ಲಿ ಕೊಳವೆಬಾವಿ ನೀರು ಬಳಸಿ ಈರುಳ್ಳಿ ನಾಟಿ ಮಾಡಿ, ಮುಂಗಾರು ಮಳೆ ಆರಂಭಕ್ಕೂ ಮುಂಚೆ ಬೆಳೆ ಕೊಯ್ಲಿಗೆ ಬರುವ ಕಾರಣ ಉತ್ತಮ ದರ ಸಿಗುತ್ತದೆ ಎಂದು ರೈತರು ಕನಸು ಈಗ ನುಚ್ಚು ನೂರಾಗಿದೆ. ಒಂದು ಕಡೆ ಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮಕ್ಕೆ ಸುಮಾರು ಈರುಳ್ಳಿ ಕೊಳೆತು ಹೋಗಿದೆ. ಇನ್ನೊಂದು ಕಡೆ ತಾನು ಬೆಳೆದ ಈರುಳ್ಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ.
ಅನೇಕ ರೈತರು ಈರುಳ್ಳಿಯನ್ನು ಹೊಲದಲ್ಲಿಟ್ಟು ಕಾಯುತ್ತಿದ್ದಾರೆ.
ಮಧ್ಯವರ್ತಕರು ರೈತರು ಬೆಳೆದ ಈರುಳ್ಳಿಗೆ 60-65ಕೆಜಿ ಇರುವ ಒಂದು ಚೀಲಕ್ಕೆ 100ರಿಂದ 150 ಕೇಳುತ್ತಿದ್ದಾರೆ. ಸಾಲ ಸೂಲ ಮಾಡಿ ಬೆಳೆ ಬೆಳೆದರೂ ಅದಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಎಂದು ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ.