ಕಳೆದ ಕೆಲ ದಿನಗಳಿಂದ ಮಳೆಯಿಂದಾಗಿ ಅವಾಂತರ ಸೃಷ್ಠಿ ಆಗಿದೆ. ನದಿಗಳಲ್ಲಿ ನೀರು ತುಂಬಿ ಹರೆಯುತ್ತಿದೆ. ಕೆಆರ್ಎಸ್ ನ ನೀರಿನ ಮಟ್ಟ ಹೆಚ್ಚಳವಾಗಿದೆ.
ಒಳ ಹರಿವಿನ ಪ್ರಮಾಣ ಕೂಡ 15000 ಕ್ಯುಸೆಕ್ ದಾಟಿದೆ. ಇಂದಿನ ಜಲಾಶಯದ ಮಟ್ಟ 101.72 ಅಡಿ ಇದೆ. ಒಳಹರಿವು 15885 ಕ್ಯುಸೆಕ್ ಮತ್ತು ಹೊರ ಹರಿವು 3524 ಕ್ಯುಸೆಕ್ ಇದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗ ಮಂಡ್ಯ ಸಮೀಪದ ಚಿಕ್ಕ ಮಂಡ್ಯ ಕೆರೆ ಅಂಗಳ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ರಾತ್ರಿಯೆಲ್ಲ ತೊಂದರೆ ಅನುಭವಿಸುವಂತಾಗಿದೆ. ನಗರಸಭೆ ಅಧಿಕಾರಿಗಳು ಯಾವುದೇ ರೀತಿ ಸ್ಪಂದಿಸದೇ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಂಡ್ಯ ಮಾತ್ರವಲ್ಲದೇ ನಗರದ ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.