Saturday, October 5, 2024
Saturday, October 5, 2024

ಆಂಧ್ರದ ಕರಾವಳಿಯಲ್ಲಿ ತೇಲಿಬಂದ ರಥ ಚಿನ್ನದ್ದಲ್ಲ!

Date:

ಕೆಲವೇ ಕೆಲವು ದಿನಗಳ ಹಿಂದಿನ ಮಾತಿದು. ಸಮುದ್ರದ ರಾಕ್ಷಸ ಅಲೆಗಳ ಮಧ್ಯದಿಂದ ತೇಲಿ ಬಂದಿತ್ತು ಚಿನ್ನದ ರಥ. ಹಾಗೆ ರಥ ತೇಲಿ ಬರೋದನ್ನ ನಾವು ಸಿನೆಮಾದಲ್ಲಿ ಮಾತ್ರ ನೋಡಿರಬಹುದು. ಆದರೆ ಇದು ಸಿನೆಮಾ ಅಲ್ಲ.. ವಾಸ್ತವದಲ್ಲಿ ನಡೆದ ಘಟನೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಾಪಲ್ಲಿಯ ಕಡಲ ದಡದಲ್ಲಿ ಹೀಗೆ ತೇಲಿ ಬಂದಿತ್ತು ಬಂಗಾರದ ರಥ.

ಇಡೀ ವಿಶ್ವವೇ ಈ ಒಂದು ದೃಶ್ಯವನ್ನ ನೋಡಿ ದಂಗಾಗಿ ಹೋಗಿತ್ತು.
ಅಸಾನಿ ಚಂಡಮಾರುತದ ರೌದ್ರಾವತಾರಕ್ಕೆ ಸಮುದ್ರದ ಅಲೆಗಳು ಅಬ್ಬರಿಸ್ತಾ ಇತ್ತು. ಅದೇ ಸಮುದ್ರದ ಅಲೆಗಳ ನಡುವಿನಿಂದ ತೇಲಿ ಬಂದಿತ್ತು ಈ ಹೊನ್ನಿನ ರಥ.

ಇದೇ ರಥದ ಬಗ್ಗೆ ಈಗ ನಾನಾ ಕಥೆಗಳು ಹುಟ್ಟಿಕೊಂಡಿವೆ. ಈ ರಥ ಬಂದಿದ್ದೆಲ್ಲಿಂದ… ಇಲ್ಲಿಗೇಕೆ ಬಂತು.. ಇದನ್ನ ಯಾರಾದರೂ ಉದ್ದೇಶ ಪೂರಕವಾಗಿ ಕಳುಹಿಸಿದ್ದಾರಾ ಅನ್ನೊ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಸಲಿಗೆ ಈ ರಥ ತೇಲಿ ಬಂದಿರೋ ರೀತಿ ನೋಡ್ತಿದ್ರೇನೆ ಅನೇಕ ಅನುಮಾನಗಳು ಕಾಡುತ್ತದೆ. ಕಾರಣ ಈ ರಥವನ್ನ ಖಾಲಿ ಡ್ರಮ್ಮ್‌ಗಳನ್ನ ಸೇರಿಸಿ ತೆಪ್ಪದ ರೀತಿ ಮಾಡಿ, ಅದರ ಮೇಲೆ ರಥವನ್ನ ತೇಲುವಂತೆ ಮಾಡಲಾಗಿದೆ. ಇನ್ನೂ ಈ ರಥದ ಕಂಬಿಗಳ ಮೇಲೆ 16-01-2022 ಅಂತ ಬರೆದಿರುವುದನ್ನ ಸಹ ಕಾಣಬಹುದಾಗಿದೆ. ಇದೆಲ್ಲವನ್ನ ಗಮನಿಸಿದ್ರೆ, ಯಾರೋ ಇದನ್ನ ಉದ್ದೇಶ ಪೂರಕವಾಗಿಯೇ ಮಾಡಿದ್ದಿರಬಹುದೇನೋ ಎಂದೆನಿಸುತ್ತದೆ.

ಇನ್ನೂ ಚಿನ್ನದ ರಥ ಅಂತ ಹೇಳಲಾಗುತ್ತಿರೋ ಈ ರಥ. ಅಸಲಿಗೆ ಚಿನ್ನದ ರಥವೇ ಅಲ್ಲ..! ಇದು ಸ್ಟೀಲ್ ಲೋಹದ ರಥವಾಗಿದ್ದು, ಇದಕ್ಕೆ ಗೋಲ್ಡ್ ಕಲರ್‌ನ್ನ ಹಚ್ಚಲಾಗಿದೆ, ಅಂತ ಶ್ರೀಕಾಕುಳಂ ಜಿಲ್ಲೆ ತೆಕ್ಕಲಿಯ ಇನ್ಸ್ ಪೆಕ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಬಹುಶಃ ಥೈಲ್ಯಾಂಡ್ ಅಥವಾ ಮಯನ್ಮಾರ್‌ನಿಂದ ತೇಲಿ ಬಂದಿರೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...