Thursday, June 18, 2026
Thursday, June 18, 2026

ತಾಲಿಬಾನ್: ಮಗು ಚಿವುಟಿ, ತೊಟ್ಟಿಲು ತೂಗುವ ತಂತ್ರ

Date:

ಇತ್ತೀಚಿಗೆ ಆಫಘಾನಿಸ್ತಾನದ ಆಂತರಿಕ ಯುದ್ಧದಲ್ಲಿ ಸಾವಿಗೀಡಾದ ಸಂಬಂಧಿಕರಿಗೆ ನಿವೇಶನ ನೀಡುವುದಾಗಿ ಅಲ್ಲಿನ ಪ್ರಸ್ತುತ ತಾಲಿಬಾನ್ ಸರ್ಕಾರದ ಒಳಾಡಳಿತದ ಮಂತ್ರಿ ಸಿರಾಜುದ್ದೀನ್ ಹಕ್ಕಾನಿ ಹೇಳಿದ್ದಾರೆ.

ಕಾಬುಲ್ ಹೋಟೆಲ್ನಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾವಿಗೀಡಾದವರ ಸಂಬಂಧಿಗಳ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ಮತ್ತು 10 ಸಾವಿರ ಆಫಘಾನಿಸ್ (112 USG) ಹಣ ಪರಿಹಾರ ನೀಡಿದೆ. ಈ ಕ್ರಮದ ಮೂಲಕ ಜಗತ್ತಿಗೆ ತನ್ನ ಪ್ರಜಾ ಪ್ರೀತಿಯನ್ನ ತೋರಿಸಿದೆ. ತನ್ನವರನ್ನೇ ಅಮಾನುಷವಾಗಿ ಮಾರಣಹೋಮಗೈದ ಅಲ್ಲಿನ ತಾಲಿಬಾನಿಗಳ ಈ ನಾಟಕ ಕಣ್ಣೊರೆಸುವ ತಂತ್ರವಾಗಿದೆ ಎನ್ನದೇ ವಿಧಿಯಿಲ್ಲ.

ಈಗಾಗಲೇ ಅಮೆರಿಕ ನಿರೀಕ್ಷಿಸಿದಂತೆ ಆಫಘಾನಿಸ್ತಾನದ ಇಡಿ ಜನಸಂಖ್ಯೆಯು ಬಡತನಕ್ಕೆ ಜಾರಿ ಬೀಳುವ ಸಂದರ್ಭವಿದೆ. ಈ ಅಭಿಪ್ರಾಯದ ವಿರುದ್ಧ ಇಡೀ ಜಗತ್ತನ್ನು ನೆರವಿಗಾಗಿ ತನ್ನತ್ತ ಸೆಳೆಯುವ ಪ್ರಯತ್ನ ಇದಾಗಿದೆ. ಈ ಪರಿಹಾರ ಘೋಷಣೆ ಮಾಡಿರುವುದು ತಾಲಿಬಾನಿಗಳ ಸರ್ಕಾರದಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.

ಅಮೇರಿಕಾದ ಬಾಂಬ್ ದಾಳಿಯಲ್ಲಿ ಸಾವಿಗೀಡಾದ ತನ್ನ ಸೈನಿಕರ ಹುತಾತ್ಮರು ಎಂದು ಕರೆದುಕೊಂಡಿದೆ.ಮಹಿಳೆಯರು ಮತ್ತು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡ ತಾಲಿಬಾನ್ ಸರ್ಕಾರ ಇನ್ನೂ ಏನೇನು ನಾಟಕವಾಡುತ್ತದೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಪರಿಹಾರ ಘೋಷಣೆ ಜಗತ್ತಿನ ಇತರ ದೇಶಗಳನ್ನ ಹುಬ್ಬೇರಿಸುವಂತೆ ಮಾಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...