ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್. ಸಾಮಾನ್ಯ ಸೇವಾಕೇಂದ್ರ CSC ಪ್ರಾರಂಭಿಸಿದೆ.
ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಯೋಜನಾಕಚೇರಿಯಲ್ಲಿ 1001 ನೇ ಪಾನ್ ಕಾರ್ಡ್, ಹಾಗೂ 101 ನೇ ಕಿಸಾನ್ ಕ್ರೆಡಿಟ್ ಕಾರ್ಡ್ ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶ್ರೀ ವಸಂತ ದೇವಾಡಿಗ, ಜಿಲ್ಲಾ ಸಿ.ಎಸ್.ಸಿ.ನೋಡಲ್ ಅಧಿಕಾರಿ ನಂಜುಂಡ ಪ್ರಸಾದ್ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿ ಮಂಜುನಾಥ್ ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವಾ ಶುಲ್ಕಕ್ಕಿಂತಲೂ ಅಧಿಕ ಖರ್ಚಾಗುತ್ತಿದ್ದು ಇದರ ಹೊರೆಯನ್ನು ಸಾರ್ವಜನಿಕರಿಗೆ ಕಡಿಮೆಗೊಳಿಸುವ ಸಲುವಾಗಿ ಯೋಜನೆಯು ಸಿ.ಎಸ್.ಸಿ.ಕೇಂದ್ರಗಳನ್ನು ಪ್ರತಿ ಗ್ರಾಮದಲ್ಲಿಯೂ ಪ್ರಾರಂಭಗೊಳಿಸಲು ಸಜ್ಜಾಗಿದೆ. ಪ್ರಸ್ತುತ 6000 ಸಿ.ಎಸ್ಸಿ ಕೇಂದ್ರಗಳು ಕರ್ನಾಟಕದಾದ್ಯಂತ ಪ್ರಾರಂಭವಾಗಿದ್ದು 10000 ಕೇಂದ್ರಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಯೋಜನಾಧಿಕಾರಿ ಶ್ರೀ ವಸಂತ ದೇವಾಡಿಗ ತಿಳಿಸಿದರು.
ವರದಿ ಸೌಜನ್ಯ; ಎನ್ .ನಂಜುಂಡ ಪ್ರಸಾದ್.