2021-22 ನೇ ಸಾಲಿನಲ್ಲಿ ಗದಗ ಬೆಟಗೇರಿ ಹಾಗೂ ಇನ್ನಿತರೆ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಜಲಾಶಯದಿಂದ ಭದ್ರಾ ನದಿ ಮೂಲಕ ಮೇ 6 ರಿಂದ ರಾತ್ರಿ.10:30 ರಿಂದ ಈ ಕೆಳಕಂಡಂತೆ ನೀರನ್ನು ಹರಿಸಲಾಗುತ್ತಿದೆ.
ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಮೇ 06 ರಂದು 3800 ಕ್ಯೂಸೆಕ್ಸ್, ಮೇ 07 ರಂದು 4340 ಕ್ಯೂಸೆಕ್ಸ್, ಮೇ 08 ರಂದು 4520 ಕ್ಯೂಸೆಕ್ಸ್, ಮೇ 09 ರಂದು 4520 ಕ್ಯೂಸೆಕ್ಸ್, ಮೇ 10 ರಂದು 4520 ಕ್ಯೂಸೆಕ್ಸ್ ಮತ್ತು ಮೇ 11 ರಂದು 4340 ಕ್ಯೂಸೆಕ್ಸ್ ಒಟ್ಟು 26040(2.25 ಟಿಎಂಸಿ) ಕ್ಯೂಸೆಕ್ಸ್ ನೀರು ಹರಿಸಲಾಗುವುದು.
ಆದ್ದರಿಂದ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮೇಲೆ ತಿಳಿಸಿದ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನು ಸಹ ನಿಷೇಧಿಸಲಾಗಿದೆ.