Wednesday, December 17, 2025
Wednesday, December 17, 2025

ಪಶುವೈದ್ಯಕೀಯ ದಂಪತಿಗಳ ಸುವರ್ಣ ಸಾಧನೆ

Date:

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರದ ಫಟೀಕೋತ್ಸವದಲ್ಲಿ ಪಶುವೈದ್ಯ ಡಾ. ಸಿ.ಎಲ್.ಮಣಿಕಾಂತ್ ಮತ್ತು ಅವರ ಪತ್ನಿ ಡಾ: ಪವಿತ್ರಾ ಇವರಿಗೆ ಎಂವಿಎಸ್‌ಸಿ ಸ್ನಾತಕೋತ್ತರ ಶಿಕ್ಷಣದಲ್ಲಿ ಅತ್ಯಂತ ಹೆಚ್ಚುವರಿ ಅಂಕ ಪಡೆದಿರುವುದಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಚಿನ್ನದ ಪದಕ ನೀಡುವುದರ ಮೂಲಕ ಗೌರವ ಪ್ರಧಾನ ಮಾಡಿದರು.

ಡಾ: ಮಣಿಕಾಂತ್ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಮತ್ತು ಡಾ: ಪವಿತ್ರಾ ಪಶುವೈದ್ಯಕೀಯ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುತ್ತಾರೆ.

ಸದ್ಯ ಚಿಕ್ಕಮಗಳೂರಿನ ಹಳ್ಳಿಗಾಡು ಭಾಗದಲ್ಲಿ ಜನಪ್ರಿಯ ಪಶುವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಈ ಪಶುವೈದ್ಯ ದಂಪತಿ ರಾತ್ರಿ ಹಗಲೆನ್ನದೇ ಪಶುಸೇವೆಯಲ್ಲಿ ಅವರನ್ನು ತೊಡಗಿಸಿ ಕೊಂಡಿದ್ದಾರೆ. ಸ್ನಾತಕೋತ್ತರ ಸಂಶೋಧನಾ ಸಮಯದಲ್ಲಿ ಪಡೆದ ಪರಿಣತೆಯನ್ನು ಮತ್ತು ಕಲಿತ ವಿದ್ಯೆಯನ್ನು ಕ್ಷೇತ್ರ ಮಟ್ಟದಲ್ಲಿ ಕಾರ್ಯಗೊಳಿಸುತ್ತಿರುವುದು ಇವರ ಹೆಮ್ಮೆಯ ಕಾರ್ಯವಾಗಿದೆ.

ಪಶುಚಿಕಿತ್ಸಾಲಯದಲ್ಲಿ ಜಾನುವಾರು ಅಂಗಗಳ ವಸ್ತುಸಂಗ್ರಹಾಲಯ ಮತ್ತು ಪ್ರಯೋಗಾಲಯ ಸ್ಥಾಪಿಸಿ ಗೋಪಾಲಕರಿಗೆ ಜ್ಞಾನ ಮತ್ತು ಸೇವೆ ನೀಡುತ್ತಿರುವುದು ಇವರ ವಿಶೇಷತೆ. ಸದಾ ನೂತನ ವಿಷಯಗಳನ್ನು ಹಾಗೂ ಹೊಸ ಆವಿಷ್ಕಾರಗಳನ್ನು ಗ್ರಾಮೀಣ ರೈತರಿಗೆ ತಲುಪಿಸುವ ಕಾಯಕದಲ್ಲಿ ಇವರು ತೊಡಗಿರುವುದು ಇವರ ಕಾರ್ಯ ಚಟುವಟಿಕೆ ಸೂಚಿಸುತ್ತದೆ.

ಸ್ನಾತಕೋತ್ತರ ಅಧ್ಯಯನದ ಸಮಯದಲ್ಲಿಯೂ ಸಹ ಈ ದಂಪತಿಗಳು ದಕ್ಷವಾಗಿ ಕಾರ್ಯನಿರ್ವಹಿಸಿ ಉತ್ತಮ ಗುಣಮಟ್ಟದ ಸಂಶೋಧನೆ ಮಾಡಿದ್ದು, ಸದಾ ಚಿಂತನಶೀಲರಾಗಿದ್ದರು ಎನ್ನುತ್ತಾ ಇವರಿಬ್ಬರಿಗೆ ಶುಭ ಕೋರುತ್ತಾರೆ ಇವರ ಮಾರ್ಗದರ್ಶಕರಾದ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ: ಎನ್.ಬಿ.ಶ್ರೀಧರ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...