Wednesday, December 17, 2025
Wednesday, December 17, 2025

ಪಂಜಾಬ್ ಗೆಲುವಿನ ಹೆಜ್ಜೆ

Date:

ಶಿಖರ್ ಧವನ್ (62) ಅವರ ಅಜೇಯ ಅರ್ಧಶತಕ ಹಾಗೂ ರಬಾಡ (33 ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದು ಹತ್ತು ಅಂಕಗಳಿಸಿದ ಪಂಜಾಬ್, ಟಿವಿಯನ್ನು ಹಿಂದಕ್ಕೆ ತಳ್ಳಿ ಐದನೇ ಸ್ಥಾನಕ್ಕೇರಿತು. ಗುಜರಾತ್ ಟೈಟನ್ಸ್ ಬಳಗ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾಯಿತು.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿತು. ಪ್ರೀತಿಯಾಗಿ ಮಯಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ತಂಡ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ಎರಡು ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿ ಗೆಲುವು ಸಾಧಿಸಿತು. ಧವನ್ ಮತ್ತು ಬಾನುಪಕ್ಸ(40) ಎರಡನೆಯ ವಿಕೆಟ್ ಗೆ 87 ರನ್ ಜೊತೆಯಾಟ ನೀಡಿದರೆ ಲಿವಿಂಗ್ಸ್ಟನ್ 10 ಎಸೆತಗಳಲ್ಲಿ ಅಜೇಯ 30ರಂದು ಬಾರಿಸಿ ಗೆಲುವಿಗೆ ಸಹಕಾರ ನೀಡಿದರು.

ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಮತ್ತೊಮ್ಮೆ ವಿಫಲ ಪ್ರದರ್ಶನ ನೀಡಿದ ಶುಬ್ಮನ್ ಗಿಲ್ 9 ರನ್ ಗಳಿಗೆ ಟೈಟಾಗಿ ನಿರಾಸೆ ಮೂಡಿಸಿದರು. ಆದರೆ, ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಸಾಯಿ ಸುದರ್ಶನ್ ನಿಧಾನಗತಿಯಲ್ಲಿ ರನ್ ಗಳಿಸಲು ಆರಂಭಿಸಿದರು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಹಾ ಇಂದಿನ ಪಂದ್ಯದಂತೆ ಸ್ಫೋಟಕ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದರೊ 21 ರನ್ ಗಳಿಗೆ ಸೀಮಿತ ಗೊಂಡರು. ರಬಾಡ ಎಸೆತಕ್ಕೆ ಮಯಂಕ್ ಗೆ ಕ್ಯಾಚ್ ಕೊಟ್ಟು ಅವರು ನಿರಾಸೆಯಿಂದ
ಮರಳಿದರು. ಆ ಬಳಿಕ ಗುಜರಾತ್ ತಂಡದ ವಿಕೆಟ್ ಗಳು ಪತನಗೊಳ್ಳುತ್ತದೆ ಸಾಗಿದವು. ನಾಯಕ ಹಾರ್ದಿಕ್ ಪಾಂಡ್ಯ ಬಂದಷ್ಟೇ ವೇಗದಲ್ಲಿ ಎಲ್ಬಿಡಬ್ಲ್ಯು ಗೆ ಮರಳಿದರು. ಇಂದಿನ ಪಂದ್ಯದಲ್ಲಿ ಹೀರೋ ಗಳಾದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವತಿಯಾ ತಲ 11 ರನ್ ಗಳನ್ನು ಮಾತ್ರ ಗಳಿಸಿ ವಾಪಸಾದರು. ಈ ವೇಳೆ 16 ಓವರ್ ಗಳಲ್ಲಿ 5 ವಿಕೆಟ್ ಗೆ 112 ರನ್ ಗಳಿಸಿದ ಗುಜರಾತ್ ಹಿನ್ನಡೆಗೆ ಒಳಗಾಯಿತು. ಆಲ್-ರೌಂಡರ್ ಬ್ಯಾಟ್ಸ್ಮನ್ ರೆಸಿಪಿ ಪಂದ್ಯದಲ್ಲಿ ಆಪತ್ಬಾಂಧವ ಎನಿಸಿಕೊಳ್ಳಲು ಶೂನ್ಯಕ್ಕೆ ಔಟಾಗಿ ಮರಳಿದರು. ಪ್ರದೀಪ್ (2), ಫರ್ಗ್ಯೂಸನ್ (5) ಹಾಗೂ ಜೋಸೆಫ್ (4) ಅವರಿಂದ ಹೆಚ್ಚು ನೆರವು ಲಭಿಸಲಿಲ್ಲ.
ಪಂಜಾಬ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಬಾಡ 33 ರನ್ ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...