ಒಂದು ನಿಮಿಷದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಹಾಗೆ ಒಂದು ನಿಮಿಷದಲ್ಲಿ ಆಗುವ ಅನಾಹುತಗಳನ್ನು ಕೂಡ ತಪ್ಪಿಸುವ ಅದೇಷ್ಟೋ ಪ್ರಸಂಗಗಳನ್ನು ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ಅಪಾಯವನ್ನು ತಪ್ಪಿಸುವ ಘಟನೆ ನಡೆದಿದೆ.
ಸಾಮಾನ್ಯವಾಗಿ ಪ್ರಾಣಿಗಳನ್ನು ಕಂಡರೆ ಅವುಗಳನ್ನು ಮುದ್ದಿಸುವುದು ಮನುಷ್ಯನ ಸಹಜ ಗುಣ. ಅದೇ ರೀತಿ ರೈತರು ಯಾವುದೇ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಾದರೆ, ಮೊದಲು ಗೋವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೂದಿಹಾಳ ಪಿರಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ವಿಜಯಪುರ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಮಂಗಳವಾರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಆಕಸ್ಮಿಕ ಘಟನೆಯೊಂದು ನಡೆದಿದೆ. ಅದೇನು ಅಂತ ಯೋಚಿಸುತ್ತಿದ್ದೀರಾ. ಮನುಷ್ಯರಿಗೆ ಬುದ್ಧಿ ಇರುತ್ತೆ, ಯಾವ ವ್ಯಕ್ತಿಗಳು ಯಾವ ಸ್ಥಾನದಲ್ಲಿದ್ದಾರೆ ಎಂದು ತಿಳಿದಿರುತ್ತದೆ. ಆದರೆ ಪ್ರಾಣಿಗಳಿಗೆ ಈ ವಿಚಾರ ತಿಳಿದಿತ್ತೆ? ಪ್ರಾಣಿ ಪ್ರೀತಿಯಿಂದ ಮುಖ್ಯಮಂತ್ರಿಗಳು ಗೋವಿಗೆ ಮುತ್ತಿಡಲು ಹೋದಾಗ, ಗೋವು ಗಾಬರಿಗೊಂಡು ತನ್ನ ಕೋಡಿನಿಂದ ಇರಿಯಲು ಮುಂದಾಗಿರುವ ಘಟನೆ ನಡೆದಿದೆ. ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ನಿಜಾಂಶ ವೇನು ಎಂದರೆ ನೆರೆದಿರುವ ಸಾವಿರಾರು ಮಂದಿಯನ್ನು ನೋಡಿ ಗೋವು ಗಾಬರಿಗೊಂಡಿದೆ. ಆದ್ದರಿಂದ ಆಕಸ್ಮಿಕ ಘಟನೆ ನಡೆದಿದೆ. ಗೋವು ತನ್ನ ಕೋಡಿನಿಂದ ತಿವಿಯಲು ಮುಂದಾದಾಗ ಅಲ್ಲಿರುವ ರೈತರು ಆಗುವ ಅಪಾಯವನ್ನು ತಪ್ಪಿಸಿದ್ದಾರೆ. ಕ್ಷಣಾರ್ಧದಲ್ಲಿ ಆಗುವ ಅಪಾಯದಿಂದ ಮುಖ್ಯಮಂತ್ರಿ ಗಳು ಪಾರಾಗಿದ್ದಾರೆ.
ಹೀಗೆ ಅನೇಕ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.