Thursday, December 18, 2025
Thursday, December 18, 2025

ಒಂದು ಸಿಗರೇಟಿನಲ್ಲಿ 7 ಸಾವಿರ ರಾಸಾಯನಿಕ ವಸ್ತುಗಳಿವೆ

Date:

ತಂಬಾಕು ವ್ಯಸನದ ದುಷ್ಪರಿಣಾಮಗಳಿಂದಾಗಿ ಪ್ರಪಂಚದಾದ್ಯಂತ ಪ್ರತೀ 06 ಸೆಕೆಂಡ್‌ಗೆ ಒಬ್ಬರು ಸಾವನ್ನಪ್ಪುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಶಿವಮೊಗ್ಗ ಜಿಲ್ಲಾ ಸಲಹೆಗಾರರಾದ ಹೇಮಂತ್‌ರಾಜ್ ಅರಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯವು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಂಬಾಕು ಮುಕ್ತ ವಿಶ್ವವಿದ್ಯಾಲಯ ಘೋಷಣಾ ಪೂರ್ವಕಾರ್ಯಕ್ರಮ ಮತ್ತು ಅರಿವುಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿಯೂ ತಂಬಾಕು ವ್ಯಸನದ ದುಷ್ಟರಿಣಾಮಗಳು ತೀವ್ರವಾಗಿವೆ. ದೇಶದ ಶೇ. 35ರಷ್ಟು ಜನಸಂಖ್ಯೆ ತಂಬಾಕು ಬಳಕೆ ಮಾಡುತ್ತಿದೆ. ಪ್ರತಿವರ್ಷ 10 ಲಕ್ಷಜನರು ತಂಬಾಕಿನಿಂದಾಗಿ ಬರುವ ಕ್ಯಾನ್ಸರ್, ಪಾರ್ಶ್ವವಾಯು, ಕ್ಷಯರೋಗ, ನ್ಯುಮೋನಿಯಾ, ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದರು.

ಸಿಗರೇಟನ್ನು 7 ಸಾವಿರ ರೀತಿಯ ವಿಷಯುಕ್ತ ರಾಸಾಯಿನಿಕ ವಸ್ತುಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ನೇರವಾಗಿ ಸೇವನೆ ಮಾಡುವವರಿಗಲ್ಲದೇ, ಪಕ್ಕದಲ್ಲಿಇದ್ದಾಗ ಆಗುವ ಪರೋಕ್ಷ ಸೇವನೆಯು ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಸ್ನೇಹಿತರು, ಸೆಲೆಬ್ರಿಟಿಗಳ ತಂಬಾಕು ಸೇವನೆ ಯುವಕರ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ. ಯೋಗ, ಧ್ಯಾನ, ಉತ್ತಮ ಸ್ನೇಹ ವಲಯಗಳು, ಪೋಷಕರ ಕಾಳಜಿಯಿಂದ ತಂಬಾಕಿನಿಂದ ದೂರ ಉಳಿಯುವುದು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಹಿಂದೆ ಶ್ರೀಮಂತರು ತಮ್ಮ ವೈಭವಗಳನ್ನು ಪ್ರದರ್ಶಿಸಲು ತಂಬಾಕು ಬಳಕೆ ಹುಟ್ಟುಹಾಕಿದರು. ಇಂದು ಅದುವೇ ವ್ಯಸನವಾಗಿ ಪರಿವರ್ತನೆ ಹೊಂದಿ ಯುವಜನರ ಬದುಕನ್ನು ನಾಶಪಡಿಸುತ್ತಿದೆ. ದೇಶದ ಬೆಳವಣಗೆಗೆ ಅಡ್ಡಿಯಾಗುವ ಹಂತಕ್ಕೆ ಬೆಳೆದಿದೆ. ಈ ಕುರಿತುದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ವಿವಿ ಯು ಕೈಗೊಂಡಿದೆ. ಮತ್ತಷ್ಟು ಚುರುಕುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್, ಆರೋಗ್ಯಾಧಿಕಾರಿಗಳು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...