Friday, October 4, 2024
Friday, October 4, 2024

 ಚಹಾದಲ್ಲಿ ಹೋದ ಮಾನ ಚೂಡಾ ಕೊಟ್ಟರೂ ಬರದು

Date:

ದತ್ತಗುರುಗಳ ದರ್ಶನಕ್ಕೆ ಬಂದ ಕೇಂದ್ರ ಸಚಿವರಿಗೆ ಏನೂ ತೊಂದರೆಯಾಗಲಿಲ್ಲ. ಆದರೆ ಅವರು ಒಂದು ಕ್ಷಣ ವಿಮಾನ ನಿಲ್ದಾಣದ ವಿಶ್ರಾಂತಿಕೋಣೆಯಲ್ಲಿ ಚಹಾ ಕೇಳಿದಾಗ ಆಯಿತು.

ಎಂತಹ ಇರಿಸುಮುರುಸಿನ ಪ್ರಸಂಗ ನಡೆದುಬಿಟ್ಟಿತು. ಒಂದು ಸಲ ಚಹಾ ಸಿಗುತ್ತ ಅಂತ ಕೇಳಿದರು. ಸುಮ್ಮನಾದರು.ಪ್ರಯಾಣದ ಪ್ರಯಾಸ ಪರಿಹಾರಕ್ಕೆ ಅಗತ್ಯವಿತ್ತು. 

ಈಗ ಯಾರೇ ಒಬ್ಬ ಪುಢಾರಿ ಬಂದರೂ ಪ್ರವಾಸಿ ಮಂದಿರಗಳಲ್ಲಿ ಚಹಾಬಿಸ್ಕತ್ತು ರೆಡಿ ಇರುತ್ತದೆ. ಆದರೆ ಕೇಂದ್ರ ಕ್ಯಾಬಿನೆಟ್ ಸಚಿವರಿಗೆ ಇಲ್ಲ ಎಂದರೆ ಆದೀತೆ! ಎರಡು ಬಾರಿ ಕೇಳಿದರೂ ಚಹಾ ಬರಲೇ ಇಲ್ಲ!.

ಈ ಘಟನೆ ನಡೆದದ್ದು ಕಲಬುರ್ಗಿಯಲ್ಲಿ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಚಹಾ ಕೇಳಿದವರು. ಗಾಣಗಾಪುರದಲ್ಲಿ ಎಲ್ಲವೂ ಸುಗಮವಾಗಿತ್ತು. ಆದರೆ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ  ಮಾತ್ರ ಸಚಿವರು ಚಹಾ ಸಿಗದೇ ಚಡಪಡಿಸಿದರಂತೆ.

ಶಿಷ್ಟಾಚಾರದ ಪ್ರಕಾರ ಸಚಿವರಿಗೆ ಈ ಎಲ್ಲವೂ ಸಿದ್ಧವಾಗಿರಬೇಕು.

ಆಹಾರ ಸುರಕ್ಷತಾ ಅಧಿಕಾರಿಯ ಕರ್ತವ್ಯ ಅದು. ಇಲ್ಲಿ ಆದ ಪ್ರಮಾದವೆಂದರೆ ಅವರನ್ನೇ ಒಳಗಡೆ ಬಿಡದೆ ಭದ್ರತಾ ಅಧಿಕಾರಿಗಳು ಆಹಾರ ಸುರಕ್ಷತಾ ಸಿಬ್ಬಂದಿಯನ್ನ ಹೊರಗೆ ನಿಲ್ಲಿಸಿದ್ದರು. ಆದರೂ ಸಂಸದ  ಡಾ‌.ಉಮೇಶ್ ಜಾಧವ್ ಗೆ ಈ ವಿಷಯ ತಳಿಯಿತು.

ತಕ್ಷಣ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ್ ಅವರನ್ನ  ತರಾಟೆಗೆ ತೆಗೆದುಕೊಂಡರು.

” ಇನ್ ಟೈಮ್ಗೆ ಟೀ ಕೊಡದಿದ್ರೆ.ನಮ್ಮ ಕರ್ನಾಟಕದ ಮಂತ್ರಿಗಳು ಏನು ತಿಳಿದುಕೊಳ್ಳುತ್ತಾರೆ?  ಮುಂದೆ ಹೀಗಾಗದಂತೆ ಬೀ ಕೇರ್ ” ಅನ್ನುವ ರೀತಿಯಲ್ಲಿ ಹೇಳಿದರಂತೆ. 

ಕೊನೆಗೆ ವಿಮಾನ ನಿಲ್ದಾಣದ ಹೊರಗಡೆ ಕ್ಯಾಂಟೀನ್ ನಿಂದ ಚಹಾ ಬಂತು.

ಸದ್ಯ ಸಚಿವ ಗಡ್ಕರಿ ಅವರು ಬೆಂಗಳೂರು ಮಂತ್ರಿಗಳಿಗೆ ಫೋನ್ ಮಾಡಿ ರಾದ್ಧಾಂತ ಎಬ್ಬಿಸಲಿಲ್ಲ. ಅದಕ್ಕೇ ಕನ್ನಡದ ಗಾದೆ ಮಾತಿನ ರೀತಿ 

” ಚಹಾದಲ್ಲಿ ಹೋದ ಮಾನ ,ಚೂಡಾ ಕೊಟ್ಟರೂ ಬರದು !” ಅನ್ನೋಣವೆ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...