Friday, February 6, 2026
Friday, February 6, 2026

ರಾಜ್ಯ ಸಂಪುಟ ವಿಸ್ತರಣೆ‌ ಹಲವು ಲೆಕ್ಕಾಚಾರದಲ್ಲಿ ಸಿಎಂ

Date:

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹಲವು ಬಾರಿ ಪ್ರಯಾಣ ನಡೆಸಿದ್ದಾರೆ. ರಾಜ್ಯದಲ್ಲಿ ಎಲೆಕ್ಷನ್​ ಕ್ಯಾಬಿನೆಟ್​ ರಚನೆಯಾಗುತ್ತದೆ ಎಂಬ ನಿರೀಕ್ಷೆ ಮಾತ್ರ ಹಾಗೆ ಇದೆ. ಕಳೆದ ಬಾರಿ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದೆ ವರಿಷ್ಠರ ಭೇಟಿಯಾಗಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈಗ ಸಂಪೂರ್ಣ ಸಿದ್ಧರಾಗಿ ಏಪ್ರಿಲ್​ 29ಕ್ಕೆ ದೆಹಲಿ ಪತ್ತೆ ಪ್ರಯಾಣ ಮಾಡಲಿದ್ದಾರೆ.

ಈ ಭೇಟಿಯಲ್ಲಿ ಮುಖ್ಯಮಂತ್ರಿಗಳು ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ? ಎಂಬುವುದರ ಕಂಪ್ಲೀಟ್​ ಡೀಟೇಲ್ಸ್ ಇಲ್ಲಿದೆ.

ರಾಜ್ಯದಲ್ಲಿ ಸದ್ಯದಲ್ಲೇ ಎಲೆಕ್ಷನ್​ ಕ್ಯಾಬಿನೆಟ್​ ರಚನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅದಕ್ಕಾಗಿಯೇ ಸಿದ್ಧರಾಗಿದ್ದಾರೆ. ವರಿಷ್ಠರನ್ನ ಭೇಟಿಯಾಗಲು ಇದೇ ಏಪ್ರಿಲ್​ 29ಕ್ಕೆ ದೆಹಲಿಗೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಈ ಭಾರೀ ಸಿಎಂ 3 ವಿಷಯ,ನೂರು ಲೆಕ್ಕಾಚಾರ ಹಾಕಿಕೊಂಡು ದೆಹಲಿ ಪ್ರಯಾಣ ಬೆಳೆಸಲಿದ್ದಾರೆ.

ಮೂರು ಪ್ರತ್ಯೇಕ ವಿಷಯಗಳನ್ನು ಸಿದ್ಧಪಡಿಸಿಕೊಂಡ ಸಿಎಂ ಬೊಮ್ಮಾಯಿ, ವರಿಷ್ಠರ ಬಳಿ ಮೂರು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಹಾಗಾದ್ರೆ, ಆ ಪತ್ತಿಗಳೆನ್ನು ಎಂಬುವುದಕ್ಕೆ ಉತ್ತರ ಇಲ್ಲಿದೆ.

ಮೊದಲಿಗೆ ಸಂಪುಟ ವಿಸ್ತರಣೆ ಬಗ್ಗೆ ಕೆಲವು ಹೆಸರುಗಳನ್ನ ಪ್ರಸ್ತಾಪಿಸಲಿದ್ದಾರೆ. ಮೊದಲೇ ಖಾಲಿಯಿರುವ 4 ಮತ್ತೆ ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರೋ 1 ಸ್ಥಾನ ಸೇರಿ ಸದ್ಯ ಖಾಲಿಯಿರುವ 5 ಸಚಿವ ಸ್ಥಾನಗಳ ಭರ್ತಿ ಮಾಡಲು ಸಿಎಂ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಇನ್ನೂ ಎರಡನೇಯದಾಗಿ ಬಹಳ ವಿಭಿನ್ನವಾದ ಆಯ್ಕೆಯ ಪ್ರಕ್ರಿಯೆತನ್ನು ಸಿಎಂ ವರಿಷ್ಟರ ಮುಂದಿಡಲಿದ್ದಾರೆ. ಕ್ಯಾಬಿನೆಟ್‌ನಲ್ಲಿನ ಎಲ್ಲಾ ಸಚಿವರನ್ನು ಹೊರಗೆ ಕಳುಹಿಸಿ, ಚುನಾವಣೆಗೆ ಮುನ್ನ ಸಂಪೂರ್ಣ ನೂತನ ಸಂಪುಟ ರಚನೆ ಕುರಿತು ಚರ್ಚಿಸಲಿದ್ದಾರೆ.

ಖಾಲಿಯಿರುವ 5 ಸಚಿವ ಸ್ಥಾನ ಭರ್ತಿ ಜೊತೆಗೆ 6 ರಿಂದ 8 ಸಚಿವರಿಗೆ ಕೊಕ್​​ ಕೊಟ್ಟು ಮತ್ತೆ ರಚನೆ ಮಾಡುವ ಬಗ್ಗೆ ಸಿಎಂ ಚಿಂತನೆ ನಡೆಸಿದ್ದಾರೆ. ಈ 3ವಿಷಯಗಳನ್ನು ಚರ್ಚೆ ಮಾಡಲು ಸಿಎಂ ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಕಳೆದ ಬಾರೀ ಸಂಪುಟ ಭರ್ತಿಗೆ ವರಿಷ್ಠರು ಅಸ್ತು ಎಂದಿರಲಿಲ್ಲ. ಆದ್ದರಿಂದ ಈ ಭಾರೀ ಸಿಎಂ ಬೊಮ್ಮಾಯಿ 3 ಪಟ್ಟಿಯೊಂದಿಗೆ ಸಿಎಂ ದೆಹಲಿ ಯಾತ್ರೆ ಆರಂಭಿಸಲಿದ್ದಾರೆ. ಯಾವ ಪಟ್ಟಿಗೆ ಹೈಕಮಾಂಡ್​ ಅಸ್ತು ಅನ್ನುತ್ತೆ ಅನ್ನೋದೇ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ambedkar Bhavan Shivamogga ಫೆಬ್ರವರಿ 14. ” ಹ್ಯಾಪಿ ಫೀಟ್- 2026″ ವಿಶೇಷ ನೃತ್ಯ ಪ್ರದರ್ಶನ

Ambedkar Bhavan Shivamogga ನೃತ್ಯಸಿರಿ ಡ್ಯಾನ್ಸ್ ಸ್ಟುಡಿಯೋ ವತಿಯಿಂದ “ಹ್ಯಾಪಿ ಫೀಟ್-2026”...

Dharmasthala Rural Development Project ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ವಿತರಣೆ

Dharmasthala Rural Development Project ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ...

ಕರವೇ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ...