Thursday, December 18, 2025
Thursday, December 18, 2025

ಕಾರ್ಯಕಾರಿಣಿ ಸಭೆಗೆ ತಂಪೆರೆದ ಮಳೆರಾಯ

Date:

ಶನಿವಾರ ವಿಜಯನಗರದಲ್ಲಿ ಸುರಿದ ಮಳೆಗೆ ಮತ್ತು ಗಾಳಿಗೆ ಬಿಜೆಪಿ ಸಭೆಯ ಪೆಂಡಾಲ್ ಗೆ ಸಾಕಷ್ಟು ಹಾನಿಯಾಗಿದೆ.

ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹಾಕಲಾಗಿದ್ದ ಸ್ವಾಗತ ಕಮಾನು, ಫ್ಲೆಕ್ಸ್‌ಗಳು ನೆಲಕ್ಕುರುಳಿ ಬಿದ್ದಿವೆ.

ಸಭಾ ಮಂಟಪದ ಮುಂಭಾಗ ಮಂಟಪದ ಮಾದರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಬಾರಿಗಾಳಿ ಮಳೆಯಿಂದಾಗಿ ಅದು ಸಂಪೂರ್ಣ ನೆಲಕ್ಕುರುಳಿದೆ. ಕಲ್ಲಿನ ರಥದ ಪ್ರತಿಕೃತಿಯಷ್ಟೇ ಉಳಿದುಕೊಂಡಿದೆ.

ಇನ್ನು, ವರ್ತುಲ ರಸ್ತೆಯುದ್ದಕ್ಕೂ ಹಾಕಿದ್ದ ಸ್ವಾಗತ ಕಮಾನುಗಳು, ಫ್ಲೆಕ್ಸ್‌ಗಳು ಕೆಳಗೆ ಬಿದ್ದಿವೆ. ಬ್ಯಾನರ್‌ಗಳು ಹರಿದು ಹೋಗಿವೆ.

ಸ್ವಾಗತ ಕಮಾನುಗಳು ರಸ್ತೆಯ ಮಧ್ಯದಲ್ಲಿಯೇ ಬಿದ್ದದ್ದರಿಂದ ವಾಹನ ಸಂಚಾರಕ್ಕೆ ಕೊಂಚ ತೊಂದರೆ ಉಂಟಾಗಿತ್ತು. ನಂತರ ಕ್ರೇನ್‌ ಮೂಲಕ ಅದನ್ನು ತೆರವುಗೊಳಿಸಲಾಯಿತು.

ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಮಳೆಯಾಗಿರುವುದು ವರದಿಯಾಗಿದೆ.

ಇಂದಿನ ಕಾರ್ಯಕ್ರಮಕ್ಕೆ ಮತ್ತೆ ಅವುಗಳನ್ನು ಫೀಕ್ಸ್ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...