Friday, February 6, 2026
Friday, February 6, 2026

ಯುದ್ಧದ ಕಾರಣ ಬೇರ್ಪಟ್ಟಿದ್ದ ಶ್ವಾನ ಮತ್ತೆ ಮಾಲೀಕನಿಗೆ ಸಿಕ್ಕಾಗ…

Date:

ಉಕ್ರೇನಿನ ಮೇಲೆ ರಷ್ಯಾ ದಾಳಿ ಮಾಡಲು ಆರಂಭಿಸಿ ಸುಮಾರು ಒಂದುವರೆ ತಿಂಗಳೇ ಕಳೆದಿದೆ. ಈ ದಾಳಿಯಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ. ಇನ್ನು ಹಲವಾರು ಮಂದಿ ಗಾಯಗೊಂಡಿದ್ದಾರೆ. ಅನೇಕರ ಕುಟುಂಬಗಳು ಚೂರುಚೂರಾಗಿದೆ. ಇದರ ಜೊತೆಗೆ ತಾವು ಪ್ರೀತಿಯಿಂದ ಸಾಕಿರುವ ಸಾಕುಪ್ರಾಣಿಗಳಿಂದ ಕೂಡ ದೂರವಾಗಿದ್ದಾರೆ.

ಉಕ್ರೇನಿನ ಯುದ್ಧದಿಂದ ಹಾನಿಗೊಳಗಾಗಿರುವ ಬುಚಾದಲ್ಲಿ ಸುಮಾರು ದಿನಗಳಿಂದ ತನ್ನ ಮಾಲೀಕರಿಂದ ಬೇರ್ಪಟ್ಟಿದ್ದ ಶ್ವಾನ ಮತ್ತೆ ಮಾಲೀಕರ ಮಡಿಲು ಸೇರಿದೆ. ಉಕ್ರೇನಿನ ಒಬ್ಬ ವ್ಯಕ್ತಿ ತನ್ನ ಮುದ್ದಿನ ನಾಯಿಯನ್ನು ಯುದ್ಧ ಸಂದರ್ಭದಲ್ಲಿ ತನ್ನಿಂದ ದೂರವಾಗಿದ್ದ ಶ್ವಾನ ತನ್ನ ಮಡಿಲ ಸೇರಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆಸ್ಸಿ ಎಂಬ ಬಿಳಿ ಹಾಗೂ ಕಪ್ಪು ಬಣ್ಣದ ಶ್ವಾನ ತನ್ನ ಮಾಲೀಕರನ್ನು ನೋಡಿ ಆತನೇ ಕಡೆಗೆ ಓಡಿಬರುವ ವಿಡಿಯೋ ವೈರಲ್ ಆಗಿದೆ. ತನ್ನ ಯಜಮಾನನ್ನು ನೋಡಿ ಸಂತೋಷದಿಂದ ಆತನ ಕಡೆಗೆ ನೆಗೆದು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ. ಹಾಗೆ ಮಾಲಿಕನು ಕೂಡ ತನ್ನ ಮುದ್ದಿನ ಶ್ವಾನವನ್ನು ನೋಡುತ್ತಿದ್ದ ಹಾಗೆಯೇ ಅದನ್ನು ಬಿಗಿದಪ್ಪಿ, ನಿರಂತರವಾಗಿ ಚುಂಬನವನ್ನು ನೀಡಿದ್ದಾನೆ.

ತನ್ನ ನೆಚ್ಚಿನ ನಾಯಿಯನ್ನು ಮತ್ತೆ ತನಗೆ ಹಿಂದಿರುಗಿಸಿದ ಕ್ಕಾಗಿ ಸೈನಿಕರಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...