Monday, December 8, 2025
Monday, December 8, 2025

ಕಾನೂನಿಗೆ ಭಂಗಬಾರದಂತೆ ಎಲ್ಲರೂ ಅವರವರ ಹಬ್ಬ ಆಚರಿಸಿ-ಸಿಎಂ

Date:

ಹೊಸ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆಯಲ್ಲಿ ಅಳವಡಿಸಲಿದ್ದೇವೆ. ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲು ಈ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಸಿಬ್ಬಂದಿಗಳಿಗಾಗಿ ಮನೆ ಕಟ್ಟಲು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮನೆಗಳಿಗಾಗಿ ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಮೂಲಕ ಪೊಲೀಸ್ ಸಿಬ್ಬಂದಿ ಮೇಲಿನ ಹೊರೆ ಕಡಿಮೆ ಮಾಡುವ ಮೂಲಕ ಸಿಹಿ ಉಣಬಡಿಸಿದ್ದಾರೆ. ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದ್ದಾರೆ.

ಈ ವರ್ಷ ನಾಡಿನ ಜನತೆಗೆ ಸಮೃದ್ದಿ, ಶಾಂತಿ ಸಿಗಲಿ ಅಂತ ಹಾರೈಸಿದ್ದಾರೆ.

ಹಲಾಲ್ ಮಾಂಸ ಬಹಿಷ್ಕಾರಕ್ಕೆ ಹಿಂದೂ ಸಂಘಟನೆಗಳ ವಿರೋಧ ವಿಚಾರವಾಗಿಯೂ ಮಾತನಾಡಿದ ಅವರು, ಎಲ್ಲ ಪೊಲೀಸ್ ಜಿಲ್ಲಾ ಎಸ್ ಪಿ ಗಳು, ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಅವರ ಹಬ್ಬಗಳನ್ನ ಆಚರಣೆ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ನಗರದ ಕೋರಮಂಗಲದ ಕೆಎಸ್‌ಆರ್​ಪಿ ಮೈದಾನದಲ್ಲಿ ಏಪ್ರಿಲ್ 2ರಂದು ನಡೆದ ಪೊಲೀಸ್ ಧ್ವಜ ದಿನಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಈ ಮಾಹಿತಿ ನೀಡಿದರು. ಸಿಎಂ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಡಿಜಿ & ಐಜಿಪಿ ಪ್ರವೀಣ್ ಸೂದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಶ್ರಮ ಅನನ್ಯ
ಪೊಲೀಸ್ ಇಲಾಖೆ ಬೇರೆ ಇಲಾಖೆಗಳಂತಲ್ಲ. ಪೊಲೀಸ್ ಇಲಾಖೆಗೂ ಇತರ ಇಲಾಖೆಗಳಿಗೂ ಬಹಳ ವ್ಯತ್ಯಾಸಗಳಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳ ದಕ್ಷತೆ ಹಾಗೂ ನಿಷ್ಠೆ ದೇಶ ಮತ್ತು ರಾಜ್ಯದ ಭದ್ರತೆಗೆ ಬಹಳ ಮುಖ್ಯವಾಗಿದೆ ಎಂದು ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಶ್ರಮ ಮತ್ತು ಕೆಲಸವನ್ನು ಕೊಂಡಾಡಿದರು.

ಇಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪದಕ ಪುರಸ್ಕೃತ 135 ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಕೆ. ಆರ್. ನಂದೀಶ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಬೆಂಗಳೂರು, ಪಿ. ಸಿದ್ದರಾಮಣ್ಣ, ಬಿ.ಎಸ್. ಚಂದ್ರ ಸೇಖರ್, ಜಿ. ಕೃಷ್ಣಕುಮಾರ್, ಹನುಮೇಶ್, ಎಚ್. ಸಿಸಿಬಿ, ಡಿವೈಎಸ್ಪಿ ಬಾಗಲಕೋಟೆ, ಆರ್. ಎನ್. ನಿಕಿಲ್ ಕುಮಾರ್, ಎಸಿಬಿ ಸಿಎಅರ್ ದಕ್ಷಿಣ, ಅರ್. ರಮೇಶ್ ಸಹಾಯಕ ಕಮಾಂಡೆಂಟ್, 3ನೇ ಪಡೆ, ವೀರೇಂದ್ರ ಕುಮಾರ್ ಡಿವೈಎಸ್ಪಿ, ಸಿಐಡಿ, ರಾಘವೇಂದ್ರ ಅರ್. ನಾಯಕ್, ಡಿವೈಎಸ್ಪಿ, ಡಿಎಎಅರ್ ಉಡುಪಿ, ಚಂದ್ರಕಾಂತ್ ನಂದಾರೆಡ್ಡಿ, ಕೆಎಸ್‌ಆರ್ಪಿ, ಕೇದಾರ್ ನಾಥ್, ಜಿ.ಎಚ್. ಪಿಟಿಎಸ್ ತಣಿಸಂದ್ರ, ಎಚ್‌.ಪಿ ಶಿವಕುಮಾರ್ ಡಿವೈಎಸ್ಪಿ, ಬೆಂಗಳೂರು ಕೇಂದ್ರ ವಲಯ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮಲ್ಲೇಶ ದೊಡ್ಡಮನಿ, ಡಿವೈಎಸ್ಪಿ ಬಳ್ಲಾರಿ, ಎಂ.ಎನ್. ಶಶಿಧರ್, ಎಸಿಪಿ , ದೆವರಾಜ ಪೊಲೀಸ್ ಠಾಣೆ, ಮುರಳೀಧರ್, ಡಿವೈಸ್ಪಿ ಕೆಜಿಎಫ್, ಅಡಿವೆಪ್ಪ, ಶೀವಪ್ಪ, ಎಸಿಬಿ ಬೆಳಗಾವಿ, ಆರ್. ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್, ಗೋವಿಂದಪುರ, ಬೆಂಗಳೂರು ನಗರ, ಯು. ಆರ್. ಮಂಜುನಾಥ್ ಜಯನಗರ ಪೊಲೀಸ್ ಠಾಣೆ, ನಟರಾಜ್ , ಪಿಐ ಸುದ್ದುಗುಂಟೆ ಪೊಲೀಸ್ ಠಾಣೆ, ಶಿವಕುಮಾರ್ ಮುಚ್ಚುಂಡಿ, ರಾವ್ ಗಣೇಶ್ ಜನಾರ್ಧನ್, ಸಿ. ನಾಗಪ್ಪ, ಸಿ.ಎಸ್. ಶಿವಣ್ಣ ನಾಯಕ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇಷ್ಟೇ ಅಲ್ಲದೇ ರೈಲ್ವೇ ಪೊಲೀಸ್ ವಿಭಾಗದಲ್ಲಿಯೂ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...