Friday, February 6, 2026
Friday, February 6, 2026

ಸೋಲದ ಉಕ್ರೇನ್ ಛಲ ಬಿಡದ ರಷ್ಯ

Date:

ರಷ್ಯಾ ಉಕ್ರೇನ್‌ನಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಕೀವ್ ವಶಪಡಿಸಿಕೊಳ್ಳುವ ಗುರಿಯೊಂದಿಗೆ ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಒಂದೊಂದು ಅಸ್ತ್ರವನ್ನೂ ಹೊರ ತೆಗೆಯುತ್ತಿದೆ.

ಈಗಾಗಲೇ ಎರಡು ಬಾರಿ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿ ದಾಳಿ ನಡೆಸಿದ ಪುಟಿನ್ ಸೇನೆ, ಇತ್ತೀಚೆಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರದ ಪ್ರಯೋಗ ಮಾಡಿದೆ ಎಂದು ಹೇಳಿಕೊಂಡಿದೆ.

ಕ್ಷಿಪಣಿಯನ್ನು ರಷ್ಯಾದ ಕಾರ್ವೆಟ್‌ನಿಂದ ಕ್ರೈಮಿಯಾದ ಸೆವಾಸ್ಟೊಪೋಲ್‌ನಲ್ಲಿ ಸಮುದ್ರದ ಮೇಲೆ ಉಡಾಯಿಸಲಾಗಿದೆ.

ಉಕ್ರೇನ್‌ನ ಒರ್ಜೆವಾದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಇದನ್ನು ಪ್ರಾರಂಭಿಸಲಾಯಿತು.

ಈ ಪ್ರದೇಶವು ರಾಜಧಾನಿ ಕೀವ್‌ನಿಂದ ಸುಮಾರು 200 ಮೈಲುಗಳಷ್ಟು ದೂರದಲ್ಲಿದೆ. ಈ ದಾಳಿಯಿಂದಾಗಿ ಪಾಶ್ಚ್ಯಾತ್ಯ ದೇಶಗಳು ನೀಡಿದ್ದ ಹಲವಾರು ಶಸ್ತ್ರಾಸ್ತ್ರಗಳು ದಾಳಿಯಲ್ಲಿ ನಾಶವಾದವು ಎಂದು ರಷ್ಯಾದ ಮಿಲಿಟರಿ ಹೇಳಿದೆ.

ಶತ್ರು ರಾಷ್ಟ್ರಗಳ ವಾಯು ಪ್ರದೇಶವನ್ನ ಭೇದಿಸಿ ಭೂಮಿಯ ಮೇಲಿನ ತನ್ನ ಗುರಿಯನ್ನ ತಲುಪಿ ನಾಶಪಡಿಸುವುದಕ್ಕೆ ಹೆಸರುವಾಸಿ ಈ ಕ್ಯಾಲಿಬರ್. ರಷ್ಯಾ ಈ ಕ್ಷಿಪಣಿಗಳನ್ನು ಅತ್ಯಂತ ನಿರ್ಣಾಯಕ ಗುರಿಗಳ ಮೇಲೆ ಮಾತ್ರ ಉಡಾಯಿಸುತ್ತದೆ. ಈ ಕ್ಷಿಪಣಿ ಭೂಮಿಗೆ ಕಡಿಮೆ ಎತ್ತರದಲ್ಲಿ ಹಾರಟ ನಡೆಸುತ್ತದೆ. ಸುಮಾರು 500 ಕೆಜಿಯ ವಾರ್ ಹೆಡ್ ಗಳನ್ನ ಹೊತ್ತೊಯ್ಯಬಲ್ಲ ಕ್ಯಾಲಿಬರ್ ಕ್ಷಿಪಣಿಯನ್ನು ಮಧ್ಯದಲ್ಲಿಯೇ ಹೇಗೆ ಬೇಕೋ ಹಾಗೆ ನಿಯಂತ್ರಿಸಬಹುದು. ಗೋದಾಮುಗಳು, ಕಮಾಂಡ್ ಪೋಸ್ಟ್‌ಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ನಾಶಮಾಡಲು ಕ್ಷಿಪಣಿಯನ್ನು ಬಳಸಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...