Saturday, March 28, 2026
Saturday, March 28, 2026

ಸಮರ ಮನುಷ್ಯ ಪುಟಿನ್ ಆಂತರ್ಯದಲ್ಲಿ ಕೌಟುಂಬಿಕ ಅಶಾಂತಿ

Date:

ಉಕ್ರೇನ್‌ ವಿರುದ್ಧದ ಯುದ್ಧದ ದುಷ್ಪರಿಣಾಮ ರಷ್ಯಾದ ಜನರ ಮೇಲಷ್ಟೇ ಅಲ್ಲದೆ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ಕುಟುಂಬಕ್ಕೂ ತಟ್ಟಿದೆ.
ಉಕ್ರೇನ್‌ ವಿಚಾರವಾಗಿ ಪುಟಿನ್‌ ತೆಗೆದುಕೊಂಡ ನಿರ್ಧಾರವು ಈಗ ಅವರ ಮಗಳ ಮದುವೆಗೇ ಕಂಟಕ ಪ್ರಾಯವಾಗಿ ಪರಿಣಮಿಸಿದೆ.

ಉಕ್ರೇನ್‌ ಮೇಲೆ ಯುದ್ಧ ಸಾರಿದ್ದಕ್ಕಾಗಿ ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಗೆ ಹಲವು ನಿರ್ಬಂಧಗಳನ್ನು ವಿಧಿಸಿವೆ. ಪರಿಣಾಮವಾಗಿ ಪುಟಿನ್‌ ಅವರ ಹಿರಿಯ ಮಗಳ ಎರಡು ಮಹತ್ವಾಕಾಂಕ್ಷೆಯ ಕನಸು ನುಚ್ಚು ನೂರಾಗಿದೆ.

ಡಾ. ಮರಿಯಾ ವೊರೊಂಟ್ಸೊವಾ (36) ಅವರೇ ವ್ಲಾಡಿಮಿರ್‌ ಪುಟಿನ್ ಮತ್ತು ಲ್ಯುಡ್ಮಿಲಾ ದಂಪತಿ ಹಿರಿಯ ಪುತ್ರಿ. ಮರಿಯಾ ಅವರ ಮದುವೆ ಮುರಿದು ಬಿದ್ದಿದೆ. ಇದರ ಜೊತೆಗೆ ಮರಿಯಾ ಅವರ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ಬಹುದೊಡ್ಡ ಕನಸು ಕನಸಾಗಿಯೇ ಉಳಿದಿದೆ.

ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ದೊಡ್ಡ ಯೋಜನೆ ಹೊಂದಿದ್ದೇನೆ. ಯುರೋಪ್‌ ಮತ್ತು ಪರ್ಷಿಯನ್ ಗಲ್ಫ್ ದೇಶಗಳಿಂದ ಶ್ರೀಮಂತ ಶೇಖ್‌ ರೋಗಿಗಳನ್ನು ಆಕರ್ಷಿಸುವ ಯೋಜನೆ ಇದಾಗಿದೆ ಎಂದು ಮಾಧ್ಯಮದೊಂದಿಗೆ ಈ ಹಿಂದೆ ಮರಿಯಾ ಹೇಳಿಕೊಂಡಿದ್ದರು.

ಆದರೆ ಉಕ್ರೇನ್‌ ಮೇಲಿನ ಯುದ್ಧದ ನಂತರ ರಷ್ಯಾಗೆ ಯೂರೋಪಿಯನ್ನರಾಗಲಿ ಅಥವಾ ಶೇಖ್‌ಗಳಾಗಲಿ ಯಾರು ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಡಚ್‌ ಉದ್ಯಮಿ ಜೋರಿಟ್‌ ಫಾಸೆನ್‌ ಅವರೊಂದಿಗಿನ ಮರಿಯಾ ವೊರೊಂಟ್ಸೊವಾ ಸಂಬಂಧವೂ ಮುರಿದು ಬಿದ್ದಿದೆ. ಯುದ್ಧ ಆರಂಭವಾದ ನಂತರ ಈ ಜೋಡಿ ಬೇರ್ಪಟ್ಟಿದೆ. ಇವರು ಮಕ್ಕಳನ್ನೂ ಹೊಂದಿದ್ದಾರೆ. ಆದರೆ ಡಚ್‌ ಉದ್ಯಮಿ ಫಾಸೆನ್‌ ತಾನು ಪುಟಿನ್‌ ಅವರ ಅಳಿಯ ಅಲ್ಲ ಎಂದು ಹೇಳಿಕೊಂಡಿದ್ದಾರೆ.

2017ರಲ್ಲಿ ಸಂದರ್ಶನವೊಂದರಲ್ಲಿ ಪುಟಿನ್‌, ನಾನು ತಾತಾ ಆಗಿದ್ದೇನೆ. ಮೊಮ್ಮಕ್ಕಳೊಂದಿಗೆ ಆಟ ಆಡಿರುವುದು ತುಂಬಾ ಕಡಿಮೆ ಎಂದು ಹೇಳಿಕೊಂಡಿದ್ದರು.
ಪುಟಿನ್‌ ಮಗಳು ವೊರೊಂಟ್ಸೊವಾ ಪ್ರಖ್ಯಾತ ವೈದ್ಯೆ. ಮಕ್ಕಳಲ್ಲಿ ಕಂಡುಬರುವ ಅಪರೂಪದ ಅನುವಂಶಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ತುಂಬಾ ಪ್ರಖ್ಯಾತಿ ಪಡೆದಿದ್ದಾರೆ. ರಷ್ಯಾ ಆರೋಗ್ಯ ಸಚಿವಾಲಯದ ಎಂಡೊಕ್ರಿನಾಲಜಿ ನ್ಯಾಷನಲ್‌ ಮೆಡಿಕಲ್‌ ರಿಸರ್ಚ್‌ ಸೆಂಟರ್‌ನಲ್ಲಿ ವೈದ್ಯಕೀಯ ಸಂಶೋಧನೆಯ ಮುಖ್ಯಸ್ಥರಾಗಿದ್ದಾರೆ.

ವೊರೊಂಟ್ಸೊವಾ ಅವರು 1986ರಲ್ಲಿ ಜನಿಸಿದರು. ಪುಟಿನ್‌ ಅವರು ಕೆಜಿಬಿ ಗೂಡಾಚಾರರಾಗಿದ್ದಾಗ ಇವರ ಜನನವಾಯಿತು. ಪುಟಿನ್‌ ಅವರಿಗೆ ಕತ್ರಿನಾ ಎಂಬ ಮತ್ತೊಬ್ಬರು ಮಗಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...