ಉಕ್ರೇನ್ ನಿಂದ ಶಿವಮೊಗ್ಗಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಭಾನುವಾರ ತಲುಪಿದ್ದಾರೆ. ವಿದ್ಯಾನಗರದ ಹನುಮಂತಯ್ಯ, ಕಲಾವತಿ ದಂಪತಿಯ ಪುತ್ರಿಯಾದ ಕೆ.ಎಚ್. ಜಯಶೀಲ ಅವರು ಸುರಕ್ಷಿತವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಭಾರತದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿ ಇದೆ. ಖಾಸಗಿ ಸೀಟ್ ಗಾಗಿ 1 ಕೋಟಿ ರೂ.ಗೂ ಹೆಚ್ಚು ಹಣ ಸಂದಾಯ ಮಾಡಬೇಕು. ಅದೇ ಉಕ್ರೇನ್ ನಲ್ಲಿ ಐದು ವರ್ಷಗಳ ಕೋರ್ಸ್ ಗೆ 25 ಲಕ್ಷ ರೂ. ಸಾಕು ಎಂದು ತಿಳಿಸಿದರು.
ಭಾರತದ 15 ವಿದ್ಯಾರ್ಥಿಗಳು ಖಜಕಿಸ್ತಾನ್ ಮೂಲಕ ಭಾರತಕ್ಕೆ ಬರಲು ನಿರ್ಧರಿಸಿದ್ದೆವು. ಫೆ.22ರ ರಾತ್ರಿ ಹಾಸ್ಟೆಲ್ ಬಿಟ್ಟು 23ರ ಬೆಳಿಗ್ಗೆ ವಿಮಾನ ನಿಲ್ದಾಣ ತಲುಪಿದೆವು. ಅಲ್ಲಿ 24 ಗಂಟೆ ಕಾದು ನಂತರ ವಿಮಾನ ಹಾರಾಟ ಆರಂಭಿಸಿತು ಎಂದು ತಿಳಿಸಿದ್ದಾರೆ.