ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ 10 ಆರೋಪಿಗಳನ್ನು ಜಯನಗರ ಠಾಣೆಗೆ ಕರೆತಂದು ಭಾನುವಾರ ವಿಚಾರಣೆಗೊಳಪಡಿಸಲಾಗಿದೆ.
ಕ್ಲಾರ್ಕ್ ಪೇಟೆಯ ಖಾಸಿಫ್ (32), ನದೀಮ್ (23), ಆಸೀಫ್ ಖಾನ್ (21), ರಿಯಾನ್ (22), ನಿಹಾಲ್ (23), ಜಿಲಾನ್ ,ಫರಾಜ್ ಪಾಶಾ (24), ಅಬ್ದುಲ್ ರೋಷನ್ (24), ಜಾಫರ್ ಸಾದಿಕ್ (55) ಎಂಬುವವರನ್ನು ಪೋಲಿಸ್ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಆರಂಭಗೊಂಡಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ನಗರದಲ್ಲಿ ಮಾರ್ಚ್ 4 ರವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರಿಯಲಿದೆ. ಆದರೂ ಬೆಳಿಗ್ಗೆ ಆರರಿಂದ ಸಂಜೆ 7ರವರೆಗೆ ವಹಿವಾಟಿಗೆ ಅವಕಾಶ ನೀಡಲಾಗಿದೆ. ಸಂಜೆ ಏಳರಿಂದ ಬೆಳಿಗ್ಗೆ 6ರವರೆಗೆ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ತಿಳಿಸಿದ್ದಾರೆ.